Home ಟಾಪ್ ಸುದ್ದಿಗಳು ಹಿಜಾಬ್​-ಕೇಸರಿ ಸಂಘರ್ಷ: ಕುಶಾಲನಗರದ ವಿದ್ಯಾರ್ಥಿಯಿಂದ ಆತ್ಮಹತ್ಯೆಗೆ ಯತ್ನ

ಹಿಜಾಬ್​-ಕೇಸರಿ ಸಂಘರ್ಷ: ಕುಶಾಲನಗರದ ವಿದ್ಯಾರ್ಥಿಯಿಂದ ಆತ್ಮಹತ್ಯೆಗೆ ಯತ್ನ

ಕುಶಾಲನಗರ: ಹಿಜಾಬ್ – ಕೇಸರಿ ಸಂಘರ್ಷ ದಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ಅಂಥೋಣಿ ಪ್ರಜ್ವಲ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಂಗಳವಾರ ಕೇಸರಿ ಶಲ್ಯ ಧರಿಸಿದ ಕಾರಣಕ್ಕೆ ಅಲ್ಪಸಂಖ್ಯಾತರ ಹಾಸ್ಟೆಲ್ ನಲ್ಲಿ ಈತನ ಮೇಲೆ ಅನ್ಯ ಕೋಮಿನ ಆರೇಳು ಮಂದಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ತನಗೆ ಸೂಕ್ತ ನ್ಯಾಯ ದೊರಕಿಲ್ಲ. ತನ್ನ ಮೇಲೆ ಆರೇಳು ವಿದ್ಯಾರ್ಥಿಗಳು ಹಲ್ಲೆ‌ ನಡೆಸಿದ್ದರು ಕೇವಲ‌ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಳ್ಳಲಾಗಿದೆ. ಹಾಸ್ಟೆಲ್ ನಲ್ಲಿ‌ ಕೂಡ ಇತರ ವಿದ್ಯಾರ್ಥಿಗಳು ತನ್ನನ್ನು ದೂರ ಇಡುತ್ತಿದ್ದಾರೆ. ಹಾಸ್ಟೆಲ್ ವಾರ್ಡನ್ ಗಳು ಕೂಡ ತನ್ನ ಅಪರಾಧಿ ಎಂಬಂತೆ ಪರಿಗಣಿಸಿ ನಿನ್ನಿಂದ ಹಾಸ್ಟೆಲ್ ಗೆ ಕಳಂಕ ಉಂಟಾಗಿದೆ ಎಂದು ಮೂದಲಿಸಿದ್ದಾರೆ. ಊರಿನಲ್ಲಿರುವ ತಾಯಿಗೆ ದೂರವಾಣಿ ಕರೆ ಮಾಡಿ ‌ಕೂಡಲೆ ಬಂದು ನಿಮ್ಮ‌ ಮಗನನ್ನು ಹಾಸ್ಟೆಲ್ ನಿಂದ ಕರೆದುಕೊಂಡು ಹೋಗಿ ಎಂದು ಒತ್ತಡ ಹೇರುತ್ತಿದ್ದಾರೆ. ತನ್ನ ಮೇಲೆ ಹಲ್ಲೆ ನಡೆದಿದ್ದರೂ ತಾನು ಯಾವುದೇ ತಪ್ಪು‌ಮಾಡದಿದ್ದರೂ ಕೂಡ ತನಗೆ ಅನ್ಯಾಯ ಉಂಟುಮಾಡುತ್ತಿದ್ದಾರೆ ಎಂದು ಪೊಲೀಸರ ಮುಂದೆ ಅಂಥೋಣಿ ಡಿಸೋಜ ಹೇಳಿಕೆ‌ ನೀಡಿದ್ದಾನೆ.
ಗುರುವಾರ ಬೆಳಗ್ಗೆ ಅಂಥೋಣಿ ಸ್ನೇಹಿತರಿಗೆ ಕರೆ ಮಾಡಿ ತಾನು ವಿಷ ಸೇವಿಸುವ ವಿಷಯ ತಿಳಿಸಿ ಫೋನ್ ಸ್ವಿಚ್ ಆಫ್ ಮಾಡಿ ಇಲಿ ವಿಷ ಸೇವಿಸಿದ್ದಾನೆ. ಹುಡುಕಾಟ ನಡೆಸಿದ ಸ್ನೇಹಿತರು ಕುಶಾಲನಗರ ಐಬಿ‌ ಬಳಿ ನಡೆದುಕೊಂಡು ಬರುತ್ತಿದ್ದ ಈತನನ್ನು ಪತ್ತೆಹಚ್ಚಿ ಕೂಡಲೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಪಡೆದುಕೊಂಡ ಕುಶಾಲನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version