Home ಟಾಪ್ ಸುದ್ದಿಗಳು ಕುಮಾರಸ್ವಾಮಿ ಸಿಎಂ ಆದರೆ ಮೊದಲು ಖುಷಿ ಪಡೋನು ನಾನೇ : ಬಿಜೆಪಿ ಶಾಸಕ

ಕುಮಾರಸ್ವಾಮಿ ಸಿಎಂ ಆದರೆ ಮೊದಲು ಖುಷಿ ಪಡೋನು ನಾನೇ : ಬಿಜೆಪಿ ಶಾಸಕ

ತುಮಕೂರು: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾದರೆ ಮೊದಲು ಖುಷಿ ಪಡೋನು ನಾನೇ ಎಂದು ಬಿಜೆಪಿ ಎಂಎಲ್ಸಿ ಎಂ.ಚಿದಾನಂದ್ ಗೌಡ ಹೇಳಿದ್ದಾರೆ.

ತುಮಕೂರಿನ ಹುಲಿಕುಂಟೆ ಗ್ರಾಮದಲ್ಲಿ ನಡೆದ ಕುಂಚಿಟಿಗ-ಒಕ್ಕಲಿಗ ಸಮಾವೇಶದಲ್ಲಿ ಎಂ.ಚಿದಾನಂದ್ ಗೌಡ ಎಚ್.ಡಿ.ಕುಮಾರಸ್ವಾಮಿ ಮತ್ತು ನಂಜಾವಧೂತ ಸ್ವಾಮೀಜಿ ಅವರೊಂದಿಗೆ ವೇದಿಕೆ ಹಂಚಿಕೊಂಡರು.

ಈ ಸಮಯದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಣ್ಣ ಮುಂದಿನ ಮುಖ್ಯಮಂತ್ರಿಯಾದರೆ, ಸಂತೋಷ ಪಡೋದ್ರಲ್ಲಿ ನಾನೂ ಕೂಡ ಒಬ್ಬ. ಅಲ್ಲದೆ, ನಮ್ಮ ಸಮುದಾಯವನ್ನು (ಕುಂಚಿಟಿಗ) ಕೇಂದ್ರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಳಿದರು.

ಅಲ್ಲದೆ, ಯಾರೇ ಮುಖ್ಯಮಂತ್ರಿಯಾದರೂ ಕುಂಚಿಟಿಗ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಹೇಳಿದರು.

Join Whatsapp
Exit mobile version