Home ಟಾಪ್ ಸುದ್ದಿಗಳು ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲಾಗದ ಕುಮಾರಸ್ವಾಮಿ: ಡಿಕೆಶಿ

ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲಾಗದ ಕುಮಾರಸ್ವಾಮಿ: ಡಿಕೆಶಿ

ಕೋಲಾರ: ಕುಮಾರಸ್ವಾಮಿಯವರಿಗೆ ಒಂದು ಸ್ವಕ್ಷೇತ್ರ ಎಂಬುದಿಲ್ಲ. ಯಾವ ಕ್ಷೇತ್ರದಲ್ಲೂ ಜನರ ವಿಶ್ವಾಸ ಉಳಿಸಿಕೊಳ್ಳಲಾಗಲು ಅವರಿಂದಾಗಲಿಲ್ಲ. ಆದ್ದರಿಂದ ಕ್ಷೇತ್ರಗಳನ್ನು ಬದಲಾಯಿಸುತ್ತಿರುತ್ತಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟೀಕಿಸಿದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಗೌತಮ್‌ ನಾಮಪತ್ರ ಸಲ್ಲಿಕೆ ಮುನ್ನ ನಗರದಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವಕಾಶವಾದಿ. ಜೆಡಿಎಸ್‌ನ ತೆನೆ ಬಿಸಾಕಿ ರಾಮನಗರದಲ್ಲಿ ತಮ್ಮ ಬಾಮೈದ ಡಾ| ಮಂಜುನಾಥ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಡಿಸಿದ್ದಾರೆ. ಟೂರಿಂಗ್‌ ಟಾಕೀಸ್‌ನಂತೆ ಕ್ಷೇತ್ರ ಬದಲಿಸುತ್ತಾ, ಈಗ ಮಂಡ್ಯದಲ್ಲಿ ನಿಲ್ಲುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

Join Whatsapp
Exit mobile version