Home ಟಾಪ್ ಸುದ್ದಿಗಳು ಕಲ್ಲಿಕೋಟೆ ಅವಳಿ ಸ್ಫೋಟ| ಪ್ರಮುಖ ಆರೋಪಿ ತಡಿಯಂಡವಿಡ ನಝೀರ್ ಖುಲಾಸೆ

ಕಲ್ಲಿಕೋಟೆ ಅವಳಿ ಸ್ಫೋಟ| ಪ್ರಮುಖ ಆರೋಪಿ ತಡಿಯಂಡವಿಡ ನಝೀರ್ ಖುಲಾಸೆ

ತಿರುವನಂತಪುರಂ: ಕಲ್ಲಿಕೋಟೆ ಅವಳಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ತಡಿಯಂಡವಿಡ ನಝೀರ್ ನನ್ನು ಕೇರಳ ಹೈ ಕೋರ್ಟ್ ಖುಲಾಸೆಗೊಳಿಸಿದೆ.

ನಝೀರ್ ಜೊತೆಗೆ ಪ್ರಕರಣದ ನಾಲ್ಕನೇ ಆರೋಪಿ ಶಫಾಝ್ ಕೂಡ ಖುಲಾಸೆಗೊಂಡಿರುವುದಾಗಿ ವರದಿಯಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯ ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ ಎನ್‌ಐಎ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.

ವಿಚಾರಣಾ ನ್ಯಾಯಾಲಯ ತಡಿಯಂಡವಿಡ ನಝೀರ್ ಗೆ ತ್ರಿವಳಿ ಜೀವಾವಧಿ ಹಾಗೂ ಶಫಾಝ್ ಗೆ ಎರಡು ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ ನ್ಯಾಯಾಲಯವು ಈ ಹಿಂದೆ ಇಬ್ಬರು ಆರೋಪಿಗಳಾದ ಅಬ್ದುಲ್ ಹಾಲಿಮ್ ಮತ್ತು ಅಬೂಬಕ್ಕರ್ ಯೂಸುಫ್ ನನ್ನು ಖುಲಾಸೆಗೊಳಿಸಿತ್ತು.

ಕಲ್ಲೀಕೋಟೆ ಅವಳಿ ಸ್ಫೋಟವು 2006ರ ಮಾರ್ಚ್ 3ರಂದು ನಡೆದಿತ್ತು. ಈ ಸ್ಫೋಟಗಳಲ್ಲಿ ಮೂವರು ಗಾಯಗೊಂಡಿದ್ದರು.

Join Whatsapp
Exit mobile version