ನಾಪೋಕ್ಲು ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹಾರಿಸ್ ಬರ್ಬರ ಕೊಲೆ !

Prasthutha|

► ವ್ಯವಹಾರ ದ್ವೇಷಿ ಪರಿಚಿತರ ಕೃತ್ಯ ?

- Advertisement -

ಪಿರಿಯಾ ಪಟ್ಟಣ : ನಾಪೋಕ್ಲು ಕೊಟ್ಟಮುಡಿ ಮಸೀದಿ  ಜಮಾಅತ್ ಅಧ್ಯಕ್ಷ ಹಾರಿಸ್ ಎಂಬವರನ್ನು ದುಷ್ಕರ್ಮಿಗಳೂ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಾರಿಸ್ ಅವರಿಗೆ 60 ವರ್ಷ ವಯಸ್ಸಾಗಿತ್ತು. ಪಿರಿಯಾಪಟ್ಟಣದಲ್ಲಿ ಹಾರಿಸ್ ಅವರನ್ನು ಕೊಲೆ ಮಾಡಲಾಗಿದ್ದು, ಅವರು ಇದೇ ಪರಿಸರದಲ್ಲಿ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದರು. ತನ್ನ ವ್ಯಾವಹಾರಿಕ ಪಾಲುದಾರರಿಂದಲೇ ಹಾರಿಸ್ ಅವರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. 12  ಲಕ್ಷ ರೂಪಾಯಿಗಳ ವ್ಯವಹಾರವೊಂದರ ಕುರಿತು ಚರ್ಚೆ ನಡೆಸಲು ಹೋಗಿದ್ದ ವೇಳೆ ಪರಿಚಿತರಿಂದಲೇ ಹಾರಿಸ್ ಅವರ ಮೇಲೆ ದಾಳಿಯಾಗಿ, ಅವರು ಕೊಲ್ಲಲ್ಪಟಿದ್ದಾರೆ ಎನ್ನಲಾಗಿದೆ.

Join Whatsapp