ಕೊಡಗು: ಕೆಎಸ್ಆರ್‌ ಟಿ ಸಿ ಬಸ್ ಅಪಘಾತ; ಇಬ್ಬರಿಗೆ ಗಂಭೀರ ಗಾಯ

Prasthutha|

ಮಡಿಕೇರಿ: ನಿಯಂತ್ರಣ ಕಳೆದುಕೊಂಡ ಕೆಎಸ್ಆರ್‌ ಟಿ ಸಿ ಬಸ್ ಬರೆಗೆ ಜಾರಿದ ಘಟನೆ ಕುಶಾಲನಗರ ಸಮೀಪದ ಆನೆಕಾಡು ಬಳಿ ನಡೆದಿದೆ.

- Advertisement -


ಹಾಸನದಿಂದ ಮಡಿಕೇರಿಗೆ ಬರುತ್ತಿದ್ದ ಈ ಬಸ್ ನಲ್ಲಿ 44 ಮಂದಿ ಪ್ರಯಾಣಿಕರಿದ್ದರು. ತಾಂತ್ರಿಕ ಸಮಸ್ಯೆಯಾಗಿ ಸೆಟ್ ಪರ್ಜ್ ತುಂಡಾದ ಕಾರಣ ನಿಯಂತ್ರಣ ತಪ್ಪಿದೆ.


ಪ್ರಯಾಣಿಕರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು,ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version