Home ಟಾಪ್ ಸುದ್ದಿಗಳು ಶ್ರೀನಗರದಲ್ಲಿ ಕೊಡಗು ಮೂಲದ ಯೋಧ ಅಲ್ತಾಫ್ ಅಹ್ಮದ್ ನಿಧನ

ಶ್ರೀನಗರದಲ್ಲಿ ಕೊಡಗು ಮೂಲದ ಯೋಧ ಅಲ್ತಾಫ್ ಅಹ್ಮದ್ ನಿಧನ

ವಿರಾಜಪೇಟೆ : ಜಮ್ಮ ಕಾಶ್ಮೀರಾದ ಶ್ರೀನಗರದಲ್ಲಿ ಹಿಮಪಾತಕ್ಕೆ ಸಿಲುಕಿ ಕೊಡಗು ಮೂಲದ ವೀರ ಯೋಧನ ಹುತಾತ್ಮರಾಗಿದ್ದಾರೆ.

ಎಒಸಿ ರೆಜಿಮೆಂಟ್ ನಲ್ಲಿ ಕರ್ತವ್ಯ ದಲ್ಲಿದ್ದ ಹವಾಲ್ದಾರ್ ಅಲ್ತಾಫ್ ಅಹ್ಮದ್ (37) ಹುತಾತ್ಮ ಯೋಧರಾಗಿದ್ದಾರೆ.

ಈ ಕುರಿತು ಯೋಧರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಕೇರಳದ ಮಟ್ಟನೂರು ಜಿಲ್ಲೆಯಲ್ಲಿ ನೆಲೆಸಿರುವ ಯೋಧನ ಪೋಷಕರು. 10 ವರ್ಷಗಳಿಂದ ಕೊಡಗಿನಲ್ಲಿ ನೆಲೆಸಿದ್ದರು. ವಿರಾಜಪೇಟೆಯ ಮೀನುಪೇಟೆಯಲ್ಲಿ ಹುಟ್ಟಿ ಬೆಳೆದಿದ್ದ ಅಲ್ತಾಫ್ ದ್ವಿತೀಯ ಪಿಯುಸಿವರೆಗೂ ವಿರಾಜಪೇಟೆ ಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು.

ಪಿಯುಸಿ ಬಳಿಕ ಆರ್ಮಿ ಸೇರಿದ್ದ ಅಲ್ತಾಫ್ ಅಪಾರ ದೇಶಭಕ್ತನಾಗಿದ್ದರು. 19 ವರ್ಷಗಳಿಂದ ದೇಶಕ್ಕಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಲ್ತಾಫ್ ಇಂದು ಹುತಾತ್ಮರಾಗಿದ್ದಾರೆ. ಇನ್ನೂ ಅಲ್ತಾಫ್ ಪತ್ನಿ ವಿರಾಜಪೇಟೆ ಬಳಿಯ ಎಡಪಾಲ ನಿವಾಸಿಯಾಗಿದ್ದಾರೆ.

Join Whatsapp
Exit mobile version