ಕೇರಳ: ಅಮಲು ಪದಾರ್ಥ ಮಾರಾಟ ಪ್ರಶ್ನಿಸಿದ ಯುವಕರಿಗೆ ಚಾಕು ಇರಿತ| ಇಬ್ಬರು ಬಲಿ; ಓರ್ವ ಗಂಭೀರ

Prasthutha|

ಕಣ್ಣೂರು: ಅಮಲು ಪದಾರ್ಥ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ ಯುವಕರ ಮೇಲೆ ಚಾಕುವಿನಿಂದ ದಾಳಿ ನಡೆದಿದ್ದು, ದಾಳಿಯಲ್ಲಿ ಇಬ್ಬರು ಬಲಿಯಾಗಿ ಓರ್ವ ಗಂಭೀರ ಗಾಯಗೊಂಡಿದ್ದಾನೆ.
ತಲಶ್ಶೇರಿಯ ಕೊಡುವಳ್ಳಿ ಎಂಬಲ್ಲಿ ಅಮಲು ಪದಾರ್ಥ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕಾಗಿ ಯುವಕರ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ನೀಟೂರು ಮೂಲದ ಖಾಲಿದ್ ಮತ್ತು ಶಮೀರ್ ಎಂಬವರು ಮೃತಪಟ್ಟಿದ್ದು, ಶಾನಿಬ್ ಎಂಬ ಯುವಕ ಚಿಂತಾಜನಕ ಸ್ಥಿತಿಯಲ್ಲಿ ತಲಶ್ಶೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Join Whatsapp