Home ಟಾಪ್ ಸುದ್ದಿಗಳು ಲಖಿಂಪುರ ಖೇರಿ ಹಿಂಸಾಚಾರ | ಇದು ವ್ಯವಸ್ಥಿತ ರೈತರ ಹತ್ಯೆ : ರಾಹುಲ್ ಗಾಂಧಿ

ಲಖಿಂಪುರ ಖೇರಿ ಹಿಂಸಾಚಾರ | ಇದು ವ್ಯವಸ್ಥಿತ ರೈತರ ಹತ್ಯೆ : ರಾಹುಲ್ ಗಾಂಧಿ

ದೆಹಲಿ: ಲಖಿಂಪುರ ಖೇರಿಯಲ್ಲಿ ನಡೆದಿರುವುದು ವ್ಯವಸ್ಥಿತ ರೈತರ ಹತ್ಯೆ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಖಿಂಪುರದಲ್ಲಿ ಸಾವನ್ನಪ್ಪಿದ ರೈತರ ಮರಣೋತ್ತರ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲಾಗಿಲ್ಲ. ಇಬ್ಬರು ಮುಖ್ಯಮಂತ್ರಿಗಳ ಜೊತೆ ಲಖಿಂಪುರಕ್ಕೆ ಭೇಟಿ ನೀಡುವುದಾಗಿ ರಾಹುಲ್ ಗಾಂಧಿ ತಿಳಿಸಿದರು.


ವಾಹನ ಹರಿಸಿ ವ್ಯವಸ್ಥಿತವಾಗಿ ರೈತರನ್ನು ಹತ್ಯೆ ಮಾಡಲಾಗಿದೆ. ನಿನ್ನೆ ಪ್ರಧಾನಿ ಲಕ್ನೋಗೆ ಭೇಟಿ ನೀಡಿದ್ದರು. ಆದರೆ ಲಖಿಂಪುರ್ ಖೇರಿಗೆ ಭೇಟಿ ನೀಡಲು ಅವರಿಗೆ ಮನಸ್ಸು ಬರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.


ಇಂದು, ಇಬ್ಬರು ಸಿಎಂಗಳೊಂದಿಗೆ ತಾವು ಉತ್ತರ ಪ್ರದೇಶದ ಲಖಿಂಪುರ್ ಖೇರಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ರೈತರ ಕುಟುಂಬಗಳನ್ನು ಬೆಂಬಲಿಸುತ್ತೇವೆ ಎಂದರು.

Join Whatsapp
Exit mobile version