Home ಟಾಪ್ ಸುದ್ದಿಗಳು ಸುಳ್ಳು ಹೇಳಿ ಸಿಕ್ಕಿ ಬಿದ್ದ ಕೇರಳದ ಕೊಲ್ಲಂ ಬಿಜೆಪಿ ಅಭ್ಯರ್ಥಿ

ಸುಳ್ಳು ಹೇಳಿ ಸಿಕ್ಕಿ ಬಿದ್ದ ಕೇರಳದ ಕೊಲ್ಲಂ ಬಿಜೆಪಿ ಅಭ್ಯರ್ಥಿ

ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಕೃಷ್ಣಕುಮಾರ್‌ ವಿರುದ್ಧ ದಾಳಿ ನಡೆಸಿದ್ದು ವಿಪಕ್ಷಗಳಲ್ಲ, ಸ್ವಪಕ್ಷದ ಸ್ಥಳೀಯ ನಾಯಕ ಎಂಬುದು ಬಹಿರಂಗಗೊಂಡಿದೆ.

ಏ.22ರಂದು ಕೊಲ್ಲಂ ಕುಂದ್ರಾದಲ್ಲಿ ಚುನಾವಣೆ ರ್ಯಾಲಿ ನಡೆಸುತ್ತಿದ್ದಾಗ ತನ್ನ ಮೇಲೆ ಸ್ಕೂಟರ್‌ ಕೀ ಎಸೆದು ಹಲ್ಲೆ ಮಾಡಲಾಗಿತ್ತು. ಇದರಿಂದ ತನ್ನ ಕಣ್ಣಿಗೆ ಗಾಯವೂ ಆಗಿತ್ತು ಎಂದು ದೂರು ದಾಖಲಿಸಿದ್ದ ಕೃಷ್ಣಕುಮಾರ್, ವಿಪಕ್ಷಗಳು ತನ್ನ ವಿರುದ್ಧ ಈ ರೀತಿ ಪಿತೂರಿ ರೂಪಿಸಿವೆ ಎಂದು ಆರೋಪಿಸಿದ್ದರು. ಕೇರಳ ಬಿಜೆಪಿ‌ ನಾಯಕರು ಇದನ್ನು ಹೇರಳ ಪ್ರಚಾರ ಮಾಡಿದ್ದರು.

ಆದರೀಗ ಪೊಲೀಸರ ತನಿಖೆಯಲ್ಲಿ ಸತ್ಯ ಬಯಲಾಗಿದ್ದು, ಕೊಲ್ಲಂನ ಸ್ಥಳೀಯ ಬಿಜೆಪಿ ನಾಯಕ ಸನಾಲ್‌ ಪುಥನ್ವಿಲಾ ಎಂಬವರು ಕೃಷ್ಣಕುಮಾರ್ ಮೇಲೆ ಕೀ ಎಸೆದು ಹಲ್ಲೆ ನಡೆಸಿದ್ದರೆಂದು ತಿಳಿದುಬಂದಿದೆ. ಬಿಜೆಪಿ ದೇಶಾದ್ಯಂತ ಸುಳ್ಳುಗಳ ಮೂಲಕವೇ ಚುನಾವಣೆ ಎದುರಿಸುತ್ತಿದ್ದು, ಧರ್ಮ ರಕ್ಷಕ ಎಂದು ಘೋಷಿಸಿಕೊಂಡಿರುವ ಸಂಘಪರಿವಾರದ ರಾಜಕೀಯ ಮುಖದ ನೈತಿಕತೆ ಬಗ್ಗೆ ಅಯ್ಯೋ ಅನಿಸುತ್ತಿದೆ ಎಂದು ನೆಟ್ಟಿಗರನೇಕರು ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version