Home ಟಾಪ್ ಸುದ್ದಿಗಳು ಕೇರಳದಲ್ಲಿ ಈ ಬಾರಿ ವಿಜಯ ಪತಾಕೆ ಹಾರಿಸುವವರಾರು? ಆರಂಭಿಕ ಎಣಿಕೆಯಲ್ಲಿ ಎಲ್ ಡಿಎಫ್ ಗೆ ಮುನ್ನಡೆ,...

ಕೇರಳದಲ್ಲಿ ಈ ಬಾರಿ ವಿಜಯ ಪತಾಕೆ ಹಾರಿಸುವವರಾರು? ಆರಂಭಿಕ ಎಣಿಕೆಯಲ್ಲಿ ಎಲ್ ಡಿಎಫ್ ಗೆ ಮುನ್ನಡೆ, ಯುಡಿಎಫ್ ಗೆ ಅಗ್ನಿ ಪರೀಕ್ಷೆ!

ತಿರುವನಂತಪುರ: ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಹಂಚಿಕೆಯ ನಾಲ್ಕು ದಶಕಗಳ ಚಿತ್ರಣವನ್ನು ಈ ಬಾರಿ ಎಡ ಪ್ರಜಾಸತ್ತಾತ್ಮಕ ಬಣ(ಯುಡಿಎಫ್) ಮುರಿಯುತ್ತದೆಯೇ ಎಂಬ ಸಂಶಯ ಈ ಬಾರಿ ಆರಂಭಿಕ ಚುನಾವಣಾ ಫಲಿತಾಂಶದಲ್ಲಿ ಕಂಡುಬರುತ್ತಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಅವರ ಸಂಪುಟದ 11 ಸಚಿವರು, ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲ, ಹಿರಿಯ ಕಾಂಗ್ರೆಸ್ ಮುಖಂಡ ಊಮ್ಮನ್ ಚಾಂಡಿ, ಮೆಟ್ರೊಮ್ಯಾನ್ ಇ ಶ್ರೀಧರನ್, ಮಾಜಿ ಕೇಂದ್ರ ಸಚಿವ ಕೆ ಜೆ ಅಲ್ಫೊನ್ಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಹೀಗೆ ಪ್ರಮುಖರು ಸೇರಿ 140 ಕ್ಷೇತ್ರಗಳಿಗೆ 957 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

2016ರಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಕೇರಳದ ಕಾಂಗ್ರೆಸ್ ಅಧ್ಯಕ್ಷ ಜೋಸ್ ಕೆ ಮಣಿ ಅವರಿಗೆ ಈ ಚುನಾವಣೆ ಮುಖ್ಯವಾಗಿದೆ. ಇವರು ದಶಕಗಳ ಕಾಲ ಯುಡಿಎಫ್ ಜೊತೆ ಹೊಂದಿದ್ದ ಮೈತ್ರಿಯನ್ನು ಮುರಿದು ಎಡ ಬಣದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೇರಳದಲ್ಲಿ ಬಹಳ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು. ಹತ್ತಾರು ಸಭೆಗಳು, ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿರುವ ಕಾಂಗ್ರೆಸ್ ಗೆ ಕೇರಳದಲ್ಲಿ ಗೆಲುವಿನ ಭರವಸೆ ಸಿಗಬಹುದೇ?

Join Whatsapp
Exit mobile version