Home ಟಾಪ್ ಸುದ್ದಿಗಳು ಡ್ರಗ್ಸ್ ಪ್ರಕರಣ| ಕೇರಳ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನಿಗೆ ಜಾಮೀನು

ಡ್ರಗ್ಸ್ ಪ್ರಕರಣ| ಕೇರಳ ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನಿಗೆ ಜಾಮೀನು

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಬಂಧನಕ್ಕೊಳಗಾಗಿ ನಾಳೆಗೆ ಒಂದು ವರ್ಷ ಪೂರ್ತಿಯಾಗುತ್ತಿದ್ದಂತೆಯೇ ಬಿನೀಶ್ ಗೆ ಜಾಮೀನು ಲಭಿಸಿದೆ. ಈಡಿ ದಾಖಲಿಸಿರುವ ಪ್ರಕರಣದಲ್ಲಿ ಬಿನೀಶ್ ನಾಲ್ಕನೇ ಆರೋಪಿ.

2020 ರ ಆಗಸ್ಟ್ ನಲ್ಲಿ ಕೇರಳದ ಕೊಚ್ಚಿ ಮೂಲದ ಅನೂಪ್ ಮೊಹಮ್ಮದ್, ತ್ರಿಶೂರ್ ಮೂಲದ ರಿಜೇಶ್ ರವೀಂದ್ರನ್ ಮತ್ತು ಕನ್ನಡ ಧಾರಾವಾಹಿ ನಟಿ ಡಿ.ಅನಿಖಾ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು. ಅವರನ್ನು ವಿಚಾರಣೆ ನಡೆಸಿದಾಗ ಬಿನೀಶ್ ನ ಹೆಸರು ಕೇಳಿ ಬಂದಿತ್ತು, ಬಳಿಕ ಈಡಿ ಬಿನೀಶ್ ನನ್ನು ಬಂಧಿಸಿತ್ತು.

Join Whatsapp
Exit mobile version