Home ಟಾಪ್ ಸುದ್ದಿಗಳು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಸಿಆರ್ ನೇತೃತ್ವದ ಬಿಆರ್ ಎಸ್ ಪಕ್ಷ ಪ್ರಚಾರ

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಸಿಆರ್ ನೇತೃತ್ವದ ಬಿಆರ್ ಎಸ್ ಪಕ್ಷ ಪ್ರಚಾರ

ಮುಳಬಾಗಿಲು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪರ ಭಾರತ್ ರಾಷ್ಟ್ರ ಸಮಿತಿ ಪ್ರಚಾರ ಮಾಡಲಿದೆ. ಜೆಡಿಎಸ್ ಪಕ್ಷಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರು ಎಲ್ಲಾ ರೀತಿಯ ಬೆಂಬಲವನ್ನು ನೀಡಲಿದ್ದಾರೆ ಎಂದು ಪಂಚರತ್ನ ರಥಯಾತ್ರೆಗೆ ಕೆಸಿಆರ್ ಪ್ರತಿನಿಧಿಯಾಗಿ ಆಗಮಿಸಿದ್ದ ಶಾಸಕ ರಾಜೇಂದರ್ ರೆಡ್ಡಿ ಹೇಳಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ರಾಜೇಂದರ್ ರೆಡ್ಡಿ , ಕುಮಾರಸ್ವಾಮಿ ಅವರು ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆ ಉತ್ತಮವಾಗಿದೆ. ಅವರ ಕಾರ್ಯಕ್ರಮ ಯಶಸ್ವಿ ಆಗಲಿ ಎಂದು ನಮ್ಮ ಪಕ್ಷದಿಂದ ಹಾರಿಸಿದ್ದೇವೆ ಎಂದು ಹೇಳಿದರು. ತೆಲಂಗಾಣದ ಸಿಎಂ ಪರವಾಗಿ ನಾನು ಇಂದು ಬಂದಿದ್ದೇನೆ. ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದರು.

ಕುಮಾರಸ್ವಾಮಿಗೆ ನಮ್ಮ ಪೂರ್ಣ ಬೆಂಬಲ ಇದೆ. ಮುಂಬರುವ ಚುನಾವಣೆಯಲ್ಲೂ ಗಡಿ ಪ್ರದೇಶದಲ್ಲಿ ಸೇರಿ ರಾಜ್ಯದ ಅನೇಕ ಕಡೆ ಜೆಡಿಎಸ್ ಪರವಾಗಿ ಕೆಲಸ ಮಾಡುತ್ತೇವೆ. ತೆಲಂಗಾಣದಲ್ಲಿ ನಮ್ಮ ಸರಕಾರ ರೈತರಿಗೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿದೆ. ಕರ್ನಾಟಕದಲ್ಲಿ ರೈತರಿಗೆ ಏನಾದರೂ ಸಹಾಯ ಆಗಿದ್ದರೆ ಅದು ದೇವೇಗೌಡರು ಮಾಡಿರುವುದು ಮಾತ್ರ ಎಂದು ಹೇಳಿದರು.

Join Whatsapp
Exit mobile version