ಸೌದಿಯಲ್ಲಿ ಸಂಕಷ್ಟಕ್ಕೀಡಾಗಿದ್ದ ಕುಮಾರ್ ನೆರವಿಗೆ KCF ಸೌದಿ ಘಟಕ

Prasthutha|

ಸೌದಿಯ ರಿಯಾದಿನ ಕಂಪನಿಯೊಂದರಲ್ಲಿ ನೌಕರರಾಗಿದ್ದ ಮೂಡಿಗೆರೆಯ ಕುಮಾರ್ ಎಂಬವರು ತಾಯ್ನಾಡಿಗೆ ಮರಳಲು ಅಸಾಧ್ಯವಾಗಿತ್ತು. ಆ ಯುವಕನ ನೆರವಿಗೆ ಧಾವಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಘಟಕ, ಕುಮಾರ್ ಅವರನ್ನು ಅವರ ಊರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.

- Advertisement -

ಕಾರಾಣಾಂತರಗಳಿಂದ ಕುಮಾರ್ ರ ಮೇಲೆ ಕಂಪನಿಯು ಕೇಸು ದಾಖಲಿಸಿತ್ತು. ತೀರ್ಪು ಕುಮಾರ್ ಅವರ ವಿರುದ್ಧ ಬಂದಿದ್ದು, ನ್ಯಾಯಾಲಯ ಅವರ ಮೇಲೆ ದೊಡ್ಡ ಮೊತ್ತದ ದಂಡವನ್ನೂ ವಿಧಿಸಿತ್ತು . ಈ ವಿಷಯವು ಕೆಸಿಎಫ್ ಗೆ ತಲುಪಿದ್ದು, ಕೆಸಿಎಫ್ ಸಾಂತ್ವನ ಇಲಾಖೆಯ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಮಲೆಬಟ್ಟು ಅವರ ಗಮನಕ್ಕೆ ಬಂದಿತ್ತು ಎನ್ನಲಾಗಿದೆ.

ಯುವಕನ ಚಿಂತಾಜನಕ ಸ್ಥಿತಿಯಿಂದ ಪಾರಾಗಲು ಕೆಸಿಎಫ್ ಸೌದಿ ಘಟಕ ಮಹತ್ತರ ಪಾತ್ರ ವಹಿಸಿದ್ದು ಕುಮಾರ್ ತಾಯ್ನಾಡಿಗೆ ಮರಳುವಂತಾಗಿದೆ.

Join Whatsapp