Home ಕರಾವಳಿ ಕಾಸರಗೋಡು: 11 ವರ್ಷದ ಬಾಲಕನ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: 11 ವರ್ಷದ ಬಾಲಕನ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: 11 ವರ್ಷದ ಬಾಲಕನ ಮೃತದೇಹ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕನ ಸಾವಿನ ಬಗ್ಗೆ ಕುಟುಂಬಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೃತ ಬಾಲಕನನ್ನು ಕಾಸರಗೋಡು ಜಿಲ್ಲೆಯ ಮಾಣಿಪಾಡಿ ಆಲಂಗೋಟ್ ಹೌಸಿಂಗ್ ಕಾಲೋನಿಯ ಅನಿಲ್ ಮತ್ತು ಸ್ವಾತಿ ದಂಪತಿಯ ಪುತ್ರ ಋತುಕೃಷ್ಣ ಎಂದು ಗುರುತಿಸಲಾಗಿದೆ. ಬಾಲಕ ಅಡುಕತ್ತಬೈಲ್ ಜಿ.ಯು.ಪಿ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ.  

ಬೆಳಗ್ಗೆ ಕೋಚಿಂಗ್ ಕ್ಯಾಂಪ್ ನಲ್ಲಿ ಪಾಲ್ಗೊಂಡು ಮನೆಗೆ ತಲುಪಿದ್ದ ಬಾಲಕ ಮಧ್ಯಾಹ್ನದ ವೇಳೆ ಆಟವಾಡುತ್ತೇನೆ ಎಂದು ಹೊರಟಾಗ ತಾಯಿ ನಿರಾಕರಿಸಿದ್ದರು. ನಂತರ ಮಲಗುವ ಕೋಣೆಗೆ ತೆರಳಿದ್ದ ಋತುಕೃಷ್ಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

Join Whatsapp
Exit mobile version