Home ಜಾಲತಾಣದಿಂದ ಬಟಿಂಡಾ ಮಿಲಿಟರಿ ನೆಲೆಯಲ್ಲಿ ಫೈರಿಂಗ್| ಕರ್ನಾಟಕ ಮೂಲದ ಯೋಧ ಹುತಾತ್ಮ

ಬಟಿಂಡಾ ಮಿಲಿಟರಿ ನೆಲೆಯಲ್ಲಿ ಫೈರಿಂಗ್| ಕರ್ನಾಟಕ ಮೂಲದ ಯೋಧ ಹುತಾತ್ಮ

ಬಾಗಲಕೋಟೆ: ಪಂಜಾಬಿನ ಬಟಿಂಡಾದ ಮಿಲಿಟರಿ ನೆಲೆಯಲ್ಲಿ ನಡೆದ ಫೈರಿಂಗ್ ಪ್ರಕರಣದಲ್ಲಿ ಕರ್ನಾಟಕ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹನಮನೇರಿ ಇನಾಂ ಗ್ರಾಮದ ನಿವಾಸಿ ಸಂತೋಷ್ ಮಲ್ಲಪ್ಪ ನಾಗರಾಳ(24) ಹುತಾತ್ಮರಾದ ಯೋಧ. ಅವರು ಕಳೆದ 4 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಇಂದು ಮುಂಜಾನೆ ನಡೆದ ಫೈರಿಂಗ್ನಲ್ಲಿ ಸಂತೋಷ್ ಸೇರಿದಂತೆ ನಾಲ್ಕು ಜನ ಹುತಾತ್ಮರಾಗಿದ್ದಾರೆ. ಇಂದು (ಏ.12) ಬೆಳಗ್ಗೆ ಪಂಜಾಬಿನ ಬಟಿಂಡಾ ಸೇನಾ ನೆಲೆಯೊಳಗೆ ಗುಂಡಿನ ದಾಳಿ ನಡೆದಿದ್ದು, ಹಂತಕರ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version