Home ಟಾಪ್ ಸುದ್ದಿಗಳು ಕಾರ್ಕಳ | ಶಾಲಾ ವಾಹನ ಅಪಘಾತ: ಓರ್ವ ವಿದ್ಯಾರ್ಥಿ ಮೃತ್ಯು

ಕಾರ್ಕಳ | ಶಾಲಾ ವಾಹನ ಅಪಘಾತ: ಓರ್ವ ವಿದ್ಯಾರ್ಥಿ ಮೃತ್ಯು

ಕಾರ್ಕಳ: ಶಾಲಾ ವಾಹನ ಉರುಳಿ ಬಿದ್ದು, ವಿದ್ಯಾರ್ಥಿಯೋರ್ವ ಮೃತ ಪಟ್ಟ ಘಟನೆ ಕುದುರೆಮುಖ-ಮಾಳ ಹೆದ್ದಾರಿಯ ಘಾಟಿ ರಸ್ತೆಯ ಎಸ್ .ಕೆ ಬಾರ್ಡರ್ ಬಳಿ ನಡೆದಿದೆ.

ಧಾರಾವಾಡ ಮೂಲದ ಹೇಮಂತ್ (24) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. 

ಶಾಲಾ ಮಕ್ಕಳು ಪ್ರವಾಸ ನಿಮಿತ್ತ ಉಡುಪಿ ಕಡೆಗೆ ತೆರಳುತ್ತಿರುವ ವೇಳೆ, ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ.

ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

Join Whatsapp
Exit mobile version