ಯತ್ನಾಳ್ ತಮ್ಮ ಮಕ್ಕಳಿಂದ ನಾಡಗೀತೆ ಹಾಡಿಸಲಿ, ಅವರ ಮನೆ ಕಸ ಗುಡಿಸುವೆ : ಕರವೇ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಸವಾಲು

Prasthutha|

ವಿಜಯಪುರ : ನನ್ನ ಮಕ್ಕಳಿಂದ ನಾಡಗೀತೆ ಬಾಯಿಪಾಠ ಹಾಡಿಸುತ್ತೇನೆ. ಬಸನಗೌಡ ಯತ್ನಾಳ್ ತಮ್ಮ ಮಕ್ಕಳಿಂದ ನಾಡಗೀತೆಯನ್ನು ಹಾಡಿದರೆ ನಾನು ಅವರ ಮನೆ ಕಸ ಹೊಡೆಯುತ್ತೇನೆ ಎಂದು ಕರವೇ ವಿಜಯಪುರ ಜಿಲ್ಲಾಧ್ಯಕ್ಷ ಎಂ.ಸಿ. ಮುಲ್ಲಾ ಸವಾಲೆಸೆದಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಈ ಸವಾಲು ಹಾಕಿದ್ದಾರೆ.

- Advertisement -

ಕನ್ನಡ ಪರ ಸಂಘಟನೆಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಇಷ್ಟೊಂದು ಭಯ ಯಾಕೆ? ಅವರು ಪ್ರಶ್ನಿಸಿದ್ದಾರೆ. ಯತ್ನಾಳ ಅವರಿಗೆ ಕರವೇ ಭಯ ಕಾಡುತ್ತಿದೆ. ಹೀಗಾಗಿ ಬಂದ್ ವಿಫಲಗೊಳಿಸಲು ವ್ಯಾಪಾರಿಗಳು, ಇತರ ಮುಖಂಡರ ಸಭೆ ಕರೆದು ಮನವಿ ಮಾಡಿದ್ದಾರೆ. ಇದುವರೆಗೂ ಯಾವ ಬಂದ್ ಸಂದರ್ಭದಲ್ಲೂ ಅವರು ಇಷ್ಟೊಂದು ಭಯಪಟ್ಟಿರಲಿಲ್ಲ ಎಂದು ಅವರು ಹೇಳಿದ್ದಾರೆ.   

Join Whatsapp