ಕೋಮು ಸೌಹಾರ್ದತೆಗೆ ಧಕ್ಕೆ ತರುವವರಿಗೆ ಬೆಂಬಲ ಇಲ್ಲ; ಹಿಂದಿನಂತೆಯೇ ಕರಗ ಉತ್ಸವ: ಆರ್.ಅಶೋಕ್

Prasthutha|

ಬೆಂಗಳೂರು: ಕೋಮು ಸೌಹಾರ್ದತೆ ಕದಡುವವರಿಗೆ ಬಿಜೆಪಿ, ಸಂಘಪರಿವಾರದ ಬೆಂಬಲ ಇಲ್ಲ.  ಹಿಂದಿನಂತೆಯೇ ಕರಗ ಉತ್ಸವ ನಡೆಯುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

- Advertisement -

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಬೆಂಗಳೂರು ಕರಗಕ್ಕೆ ಕೆಂಪೇಗೌಡರ ಕೊಡುಗೆ ಇದೆ. ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ಕೊಟ್ಟಿದ್ದರು.  ಬೆಂಗಳೂರು ಕರಗ ಹಿಂದಿನಂತಯೇ ನಡೆಯಬೇಕು ಎಂದರು. ಹಾಗೆಯೇ ಯಾರಿಂದ ಬೇಕಾದರೂ ಮಾವು ಖರೀದಿಸಬಹುದು. ಇದಕ್ಕೆ ಸರ್ಕಾರದ ಯಾವುದೇ ಅಡೆತಡೆ ಇಲ್ಲ. ಮುಸ್ಲಿಮರು ವಿಗ್ರಹ ಕೆತ್ತೋದು ಗೌರವ ವಿಚಾರ. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಸರಿಯಲ್ಲ ಎಂದು ತಿಳಿಸಿದರು.

Join Whatsapp
Exit mobile version