ಕನ್ನಡ ನಮ್ಮ ಶೃತಿ ಆಗಬೇಕು, ಅದರ ಅಭಿವೃದ್ಧಿ ಕೃತಿ ಆಗಬೇಕು: ದಸರಾ ಉದ್ಘಾಟನಾ ಭಾಷಣದಲ್ಲಿ ಹಂಸಲೇಖ

Prasthutha|

- Advertisement -

ಯಾರಿಗೆ ಕನ್ನಡ ಗೊತ್ತಿಲ್ಲ ಅನ್ನೋದರ ಬಗ್ಗೆ ಸಮೀಕ್ಷೆ ಆಗಬೇಕು

ಮೈಸೂರು: ಚಾಮುಂಡಿ ಬೆಟ್ಟದ ವೇದಿಕೆ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ದಸರಾ ಉದ್ಘಾಟಕ ಹಂಸಲೇಖ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ನಾಡ ಹಬ್ಬಕ್ಕೆ ಚಾಲನೆ ನೀಡಿದರು.

ಉದ್ಘಾಟನೆ ಬಳಿಕ  ನಾದಬ್ರಹ್ಮ ಹಂಸಲೇಖ, ಪೂಜ್ಯ ಕನ್ನಡಿಗರಿಗೆ, ಪೂಜ್ಯ ಕನ್ನಡಕ್ಕೆ, ದೇವಾಲಯ, ಪ್ರೇಮಾಲಯಕ್ಕೆ ನನ್ನ ಶರಣು ಎಂದು ತಮ್ಮ ಭಾಷಣವನ್ನು ಆರಂಭಿಸಿದರು. ಕನ್ನಡ ನಮ್ಮ ಶೃತಿ ಆಗಬೇಕು, ಅದರ ಅಭಿವೃದ್ಧಿ ನಮ್ಮ ಕೃತಿ ಆಗಬೇಕು. ನಮ್ಮ ಕಾವೇರಿಗೆ ಒಂದು ಮಿತಿಯಿದೆ. ಕನ್ನಡದ ಭಾಷೆಗೆ ಒಂದು ಮಿತಿಯಿದೆ. ಅದರ ಭಾವಕ್ಕೆ ಎಲ್ಲಿ ಮಿತಿಯಿದೆ. ನಮಗೆ ದೆಹಲಿ ಬೇಕು, ದೆಹಲಿಗೂ ನಾವು ಬೇಕು. ದೆಹಲಿಗೆ ಯಾಕೋ ಕನ್ನಡ ಬೇಡ ಅನ್ನಿಸುತ್ತಿದೆ. ಅದರ ಚಿಂತೆ ಈಗ ಬೇಡ. ಕನ್ನಡವನ್ನು ನಾವು ಪ್ರಪಂಚದ ವೇದಿಕೆಯಲ್ಲಿ ಪರಿಚಯ ಮಾಡಬೇಕು ಎಂದು ಕನ್ನಡ ಭಾಷೆಯ ಉಳಿವು, ಅಭಿವೃದ್ಧಿ ಬಗ್ಗೆ ಮಾತನಾಡಿದರು.

- Advertisement -

 ನನಗೆ ದಸರಾ ಉದ್ಘಾಟನೆಗು ಮುನ್ನ ಅನೇಕರು ಸಲಹೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ವಾಸ ಮಾಡುವ ಎಲ್ಲರೂ ಕನ್ನಡಿಗರೇ. ಯಾರಿಗೆ ಕನ್ನಡ ಗೊತ್ತಿಲ್ಲ ಅನ್ನೋದರ ಬಗ್ಗೆ ಸಮೀಕ್ಷೆ ಆಗಬೇಕು. ಸರ್ಕಾರ, ಸಾರ್ವಜನಿಕರು ಈ ಸಮೀಕ್ಷೆಗೆ ಒತ್ತಾಸೆ ನೀಡಬೇಕು. ಕನ್ನಡ ಕಲಿಯಲು ಆಸಕ್ತಿ ಇರುವವರಿಗೆ 30 ದಿನದಲ್ಲಿ ಕನ್ನಡ ಕಲಿಸುವ ಕಾರ್ಯಕ್ರಮ ಆಗಬೇಕು. ಕನ್ನಡ ಕಲಿತವರಿಗೆ ಜಮೀನು ಆರ್‌ಟಿಸಿ ಮಾದರಿಯಲ್ಲಿ ಕನ್ನಡ ಪಟ್ಟ ಕೊಡಬೇಕು. ಅದು ಬಿಪಿಎಲ್, ಎಪಿಎಲ್ ಮಾದರಿಯ ದಾಖಲೆ ಆಗಬೇಕು ಎಂದು ಹೇಳಿದರು.

ನನಗೆ ನೀಡಿದ ಈ ಅವಕಾಶಕ್ಕೆ ಯಾರನ್ನೂ ಮೊದಲು ನೆನೆಯಲಿ ಅಪ್ಪ ಗೋವಿಂದರಾಜು, ಅಮ್ಮ ರಾಜಮ್ಮನನ್ನೇ, ಗುರು ನೀಲಕಂಠನನ್ನೇ, ಸಂವಿಧಾನವನ್ನೇ, ಸಂವಿಧಾನದ ಗುಡ್ ಶಫರ್ಡ್ ಸಿಎಂ ಸಿದ್ದರಾಮಯ್ಯ ಅವರನ್ನೇ, ಸಂಘಟಕ ಡಿಸಿಎಂ ಶಿವಕುಮಾರ್ ಅವರನ್ನೆ, ಹೆಂಡ್ತಿ ಮಕ್ಕಳನ್ನೆ, ಜನರನ್ನೆ, ಈ ಭೂಮಿ ತಾಯಿಯನ್ನೇ ನಾನು ಈ ಅವಕಾಶಕ್ಕೆ ಯಾರನ್ನ ನೆನೆಯಲಿ ಎಂದು ಮನದಾಳದಿಂದ ಸಾರ್ಥಕ ಭಾವದಿಂದ ಸಂತಸ ವ್ಯಕ್ತಪಡಿಸಿದರು.

ಮುಂದುವರೆದು, ಇಲ್ಲಿ ನಿಂತು ಭೂಮಿ ತಾಯಿಯನ್ನು ಒಂದು ಘಳಿಗೆ ನೆನೆಯುತ್ತೇನೆ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ಈ ರೀತಿ ಧನ್ಯವಾದ ಹೇಳೋದು ನಮ್ಮ ಸಿನಿಮಾದವರ ಕೆಲಸ. ನನ್ನಂಥಹ ಸಾಮಾನ್ಯ ವ್ಯಕ್ತಿ ಕೈಯಲ್ಲಿ ದಸರಾ ಉದ್ಘಾಟನೆ ಮಾಡಿಸುವುದು ಸಿಎಂ ಆಸೆ ಆಗಿತ್ತು ಎಂದರು. 50 ವರ್ಷಗಳು ನನ್ನ ಸಾಧನೆಗೆ ಕಾರಣರಾದವರನ್ನು, ಭೂಮಿ ತಾಯಿಯನ್ನು ನೆನೆದಿದ್ದೇನೆ ಎಂದರು.

ಇದಾದ ಬಳಿಕ ದಸರಾ ಹಬ್ಬದ ಉದ್ಘಾಟಕರಾದ ನಾದಬ್ರಹ್ಮ ಹಂಸಲೇಖರಿಗೆ ವೀಣಾಧಾರಿಯಾದ ಸರಸ್ವತಿಯ ಗಂಧದ ವಿಗ್ರಹ ನೀಡಿ ಗೌರವ ಸಲ್ಲಿಸಲಾಯಿತು.



Join Whatsapp
Exit mobile version