Home ಟಾಪ್ ಸುದ್ದಿಗಳು ರೋಹಿತ್ ಚಕ್ರತೀರ್ಥನನ್ನು ಹೊರದಬ್ಬಿದ ಕನ್ನಡ ಸಾಹಿತ್ಯ ಪರಿಷತ್

ರೋಹಿತ್ ಚಕ್ರತೀರ್ಥನನ್ನು ಹೊರದಬ್ಬಿದ ಕನ್ನಡ ಸಾಹಿತ್ಯ ಪರಿಷತ್

ಬೆಂಗಳೂರು: ರಾಜ್ಯ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನು ತಕ್ಷಣವೇ ಸದಸ್ಯತ್ವದಿಂದ ಅಮಾನತುಗೊಳಿಸಲು ಬೆಂಗಳೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿರ್ಧರಿಸಿದೆ.


ಕುವೆಂಪು ಹಾಗೂ ರಾಜ್ಯಗೀತೆ ಕುರಿತು ರೋಹಿತ್ ಮಾಡಿರುವ ಹೇಳಿಕೆ ಅವಹೇಳನಕಾರಿಯಾಗಿದ್ದು, ಕನ್ನಡ ಪರ ಹೋರಾಟಗಾರರು ಅವರನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಯಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದರು. ಚಾಮರಾಜಪೇಟೆಯಲ್ಲಿ ನಡೆದ ಪರಿಷತ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಜಿಲ್ಲಾಧ್ಯಕ್ಷ ಪ್ರಕಾಶ್ ಮೂರ್ತಿ ವಹಿಸಿದ್ದರು.

Join Whatsapp
Exit mobile version