Home ಟಾಪ್ ಸುದ್ದಿಗಳು ಕಲ್ಲಡ್ಕ ಪ್ರಭಾಕರ್ ಭಟ್ ಸದಾ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ: ಹರೀಶ್ ಕುಮಾರ್

ಕಲ್ಲಡ್ಕ ಪ್ರಭಾಕರ್ ಭಟ್ ಸದಾ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ: ಹರೀಶ್ ಕುಮಾರ್

ಪ್ರಭಾಕರ್ ಭಟ್ ವಿರುದ್ಧ ಕಾಂಗ್ರೆಸ್ ದೂರು ದಾಖಲಿಸಲಿದೆ

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಸದಾ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು MLC ಹರೀಶ್ ಕುಮಾರ್ ಹೆಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ಒಂದು ಸಮುದಾಯದ ಮಹಿಳೆಯರನ್ನು ಅಪಮಾನಿಸಿದರೆ ದೇಶದ ಎಲ್ಲಾ ಮಹಿಳೆಯರನ್ನು ಅಪಮಾನಿಸಿದಂತೆ ಆಗುತ್ತದೆ. ಕಲ್ಲಡ್ಕ ಭಟ್ ಕೂಡ ಸಂಸ್ಥಾರಸ್ಥರು ಅವರ ಹೇಳಿಕೆ ಇಡೀ ಸಮಾಜಕ್ಕೆ ನೋವು ತಂದಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಸದಾ ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಕಲ್ಲಡ್ಕ ಭಟ್ ಪ್ರತಿಯೊಂದು ವರ್ಗದ ಜನರನ್ನು ಅಪಮಾನ ಮಾಡುತ್ತಲೇ ಬಂದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಪಕ್ಷ ದೂರು ದಾಖಲಿಸಲಿದೆ. ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Join Whatsapp
Exit mobile version