Home ತಂತ್ರಜ್ಞಾನ ಮೀರಾ ರಾಘವೇಂದ್ರ ಮಸಿ ಬಳಿದಿರುವುದು ಈ ದೇಶದ ಸಂವಿಧಾನಕ್ಕೆ, ಜನತೆಗೆ : ಬಿ. ಗೋಪಾಲ್

ಮೀರಾ ರಾಘವೇಂದ್ರ ಮಸಿ ಬಳಿದಿರುವುದು ಈ ದೇಶದ ಸಂವಿಧಾನಕ್ಕೆ, ಜನತೆಗೆ : ಬಿ. ಗೋಪಾಲ್

ಬೆಂಗಳೂರು : ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ರವರ ಮೇಲೆ ನ್ಯಾಯವಾದಿಯ ಕೋಟು ತೊಟ್ಟಿರುವ ಮೀರಾ ರಾಘವೇಂದ್ರ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿರುವುದು ಈ ದೇಶದ ಸಂವಿಧಾನಕ್ಕೆ ಮತ್ತು ಜನತೆಗೆ ಎಂದು ಪ್ರಜಾ ವಿಮೋಚನಾ ಸಂಘಟನೆಯ ಮುಖಂಡ ಬಿ. ಗೋಪಾಲ್ ಹೇಳಿದ್ದಾರೆ.

ಅವರು ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ  ವಿಚಾರವಾದಿ ಪ್ರೊ.ಕೆ. ಎಸ್. ಭಗವಾನ್ ರವರ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರಗತಿಪರರ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. 

ರಾಜ್ಯ ಮತ್ತು ರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರವು ಮನುವಾದಿ ಸರಕಾರವಾಗಿದೆ. ಜನರ ಆಶೋತ್ತರಗಳನ್ನು ಈಡೇರಿಸಲು ಈ ಸರಕಾರ ವಿಫಲವಾಗಿದೆ. ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸುತ್ತಿದೆ. ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುತ್ತಿರುವವರನ್ನು ದೇಶದ್ರೋಹಿಗಳಾಗಿ ಬಿಂಬಿಸುತ್ತಿರುವುದು ಆತಂಕಕಾರಿ ಬಿ.ಗೋಪಾಲ್ ತಿಳಿಸಿದರು.

ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಲಿಂಗೇಗೌಡ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಂವಿಧಾನದ ಎಲ್ಲಾ ಹಕ್ಕುಗಳನ್ನು ಪಡೆದು ಮೀರಾ ರಾಘವೇಂದ್ರ ವಿವೇಚನೆಯಿಲ್ಲದ ವಕೀಲರಾಗಿದ್ದಾರೆ. ಮೀರಾ ಬಳಿದಿರುವ ಮಸಿಯು ಭಗವಾನ್ ರವರಿಗಲ್ಲ ಬದಲಾಗಿ ಈ ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಬಳಿದಿರುವುದಾಗಿದೆ. ಈ ಕೃತ್ಯದ ಮೂಲಕ ಅವರು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಸರಕಾರ ತುಟಿ ಬಿಚ್ಚದಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.

ನ್ಯಾಯವಾದಿ ಜಗದೀಶ್ ಮಹಾದೇವ್, ನೋಂದಾಯಿತ ಆರೆಸ್ಸೆಸ್ ಕಾರ್ಯಕರ್ತ ಹನುಮೇ ಗೌಡ ಮತ್ತಿತರ ನಾಯಕರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

Join Whatsapp
Exit mobile version