ಜನರ ಭಾವನೆಗಳನ್ನು ಪ್ರಚೋದಿಸುವ ಮಾಧ್ಯಮಗಳ ತಂತ್ರಕ್ಕೆ ನ್ಯಾಯಾಧೀಶರು ಬಲಿಯಾಗದಿರಿ: CJI ಎನ್.ವಿ ರಮಣ

Prasthutha|

ಹೊಸದಿಲ್ಲಿ: ಜನರ ಭಾವನೆಗಳನ್ನು ಪ್ರಚೋದಿಸುವ ಮಾಧ್ಯಮಗಳ ತಂತ್ರಕ್ಕೆ ನ್ಯಾಯಾಧೀಶರು ಬಲಿಯಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಎಚ್ಚರಿಕೆ ನೀಡಿದ್ದಾರೆ.

- Advertisement -

ಪಿ.ಡಿ.ದೇಸಾಯಿ ಮೆಮೋರಿಯಲ್ ಉಪನ್ಯಾಸದ ಅಂಗವಾಗಿ ಮುಖ್ಯ ನ್ಯಾಯಾಧೀಶರು ‘ರೂಲ್ ಆಫ್ ಲಾ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು. “ಎಲ್ಲಾ ವಿಷಯಗಳನ್ನು ಉದ್ರೇಕಕಾರಿಯಾಗಿ ತೋರಿಸಲು ಮಾಧ್ಯಮಗಳಿಗೆ ಸಾಕಷ್ಟು ಆಯ್ಕೆಗಳಿವೆ. ಮಾಧ್ಯಮಗಳಲ್ಲಿ ಪ್ರಸಾರವಾಗುವ ವದಂತಿಗಳೆಲ್ಲಾ ಸರಿಯಾಗಿರಬೇಕೆಂದೇನಿಲ್ಲ. ಅವರಿಗೆ ಸರಿ ಮತ್ತು ತಪ್ಪು, ಒಳ್ಳೆಯದು ಮತ್ತು ಕೆಟ್ಟದು ಎಂದು ಗುರುತಿಸಲು ಯಾವುದೇ ಮಾರ್ಗವಿಲ್ಲ. ಆದ್ದರಿಂದ, ಮಾಧ್ಯಮ ವರದಿಗಳನ್ನು ಪ್ರಕರಣಗಳಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

 ನ್ಯಾಯಾಂಗಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂಬ ಕಲ್ಪನೆಯನ್ನು ಅವರು ಈ ವೇಳೆ ವಿರೋಧಿಸಿದ್ದಾರೆ. ಕಾರ್ಯಕಾರಿ ಮತ್ತು ಶಾಸಕಾಂಗಕ್ಕೆ ಅಧಿಕಾರವಿದೆ. ಇವುಗಳಲ್ಲಿ ಯಾವುದಕ್ಕೂ ನಿಯಂತ್ರಣವಿಲ್ಲದ ಕಾನೂನಿನ ನಿಯಮವು ಕೇವಲ ಭ್ರಮೆ ಎಂದು ಅವರು ಹೇಳಿದರು.

Join Whatsapp