Home ಟಾಪ್ ಸುದ್ದಿಗಳು ಹಿಂದೂ ಮತ್ತು ಕ್ರಿಶ್ಚಿಯನರಲ್ಲೂ ಜಿಹಾದ್ ಇದೆ- ಶಿವರಾಜ‌ ಪಾಟೀಲ್

ಹಿಂದೂ ಮತ್ತು ಕ್ರಿಶ್ಚಿಯನರಲ್ಲೂ ಜಿಹಾದ್ ಇದೆ- ಶಿವರಾಜ‌ ಪಾಟೀಲ್

ನವದೆಹಲಿ: ಜಿಹಾದ್ ಪರಿಕಲ್ಪನೆಯು ಇಸ್ಲಾಂನಲ್ಲಿ ಮಾತ್ರವಲ್ಲ, ಭಗವದ್ಗೀತೆ ಮತ್ತು ಕ್ರಿಶ್ಚಿಯಾನಿಟಿಯಲ್ಲಿಯೂ ಇದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್  ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ಮತ್ತು ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನಚರಿತ್ರೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಜಿಹಾದ್ ಇಸ್ಲಾಂನಲ್ಲಿ ಮಾತ್ರವಲ್ಲ ಭಗವದ್ಗೀತೆ, ಕ್ರಿಶ್ಚಿಯನರಲ್ಲೂ ಇದೆ. ಮುಸ್ಲಿಂ ಜಿಹಾದ್ ಬಗೆಗೆ ಮಾತ್ರ ಚರ್ಚೆ ವಿವಾದ ನಡೆಯುತ್ತಿದೆ. ಅದರ ಬಳಕೆ ಸರಿಯಿಲ್ಲದಿದ್ದರೆ ಅದರ ಉದ್ದೇಶ ಹಾಳಾಗುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಕೊಲ್ಲಲು ಮಾಡುವ ಉಪದೇಶ ಜಿಹಾದ್ ಅಲ್ಲವೆ ಎಂದು ಅವರು ಪ್ರಶ್ನಿಸಿದರು. ಕ್ರಿಶ್ಚಿಯನರಲ್ಲಿ ಹಲವು ಧರ್ಮ ಯುದ್ಧಗಳು ನಡೆದುದನ್ನೂ ಅವರು ನೆನಪಿಸಿದರು.

ಪಾಟೀಲ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಅದು ವೋಟ್ ಬ್ಯಾಂಕ್ ರಾಜಕೀಯವನ್ನು ಆಡುತ್ತಿದೆ ಎಂದು ಆರೋಪಿಸಿದೆ.

Join Whatsapp
Exit mobile version