ಬಾಕಿಯಿದ್ದ ಕರೆಂಟ್ ಬಿಲ್ ಕೇಳಲು ಹೋದ ಜೆಸ್ಕಾಂ ಸಿಬ್ಬಂದಿಗಳ ಮೇಲೆ ವ್ಯಕ್ತಿಯೋರ್ವನಿಂದ ಹಲ್ಲೆ

Prasthutha|

ಕಲಬುರಗಿ: ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತೇವೆ ಎಂದು ಹೇಳಿದಾಗಿನಿಂದ ಒಂದಲ್ಲ ಒಂದು ಸಮಸ್ಯೆಗಳು ಆಗುತ್ತಿವೆ. ಹಾಗಾಗಿ ಹಲವೆಡೆ ಸಾರ್ವಜನಿಕರು ಮತ್ತು ಸರ್ಕಾರಿ ಸಿಬ್ಬಂದಿಗಳ ಮಧ್ಯೆ ಸಂಘರ್ಷಗಳು ನಡೆಯುತ್ತಿವೆ. ಸದ್ಯ ಅಂತಹದ್ದೇ ಒಂದು ಘಟನೆ ಜಿಲ್ಲೆಯ ಆಳಂದ‌ ಪಟ್ಟಣದ ಖಾಜಿ‌ಗಲ್ಲಿಯಲ್ಲಿ ನಡೆದಿದೆ. ವಿದ್ಯುತ್ ಬಾಕಿ ಬಿಲ್ ಕೇಳಲು ಹೋಗಿದ್ದ ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿದೆ. 

- Advertisement -

ಜೆಸ್ಕಾಂ ಜೆಇ ಸಿದ್ದರಾಮಪ್ಪ, ಲೈನ್​ಮ್ಯಾನ್​ ಇಜಾಜ್​​ ಹಲ್ಲೆಗೊಳಗಾದವರು. ಸದ್ಯ ಗಾಯಳುಗಳನ್ನು ಜೆಸ್ಕಾಂ ಸಿಬ್ಬಂದಿ ಆಳಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ವಸೀಂ ಜವಳೆ ಎನ್ನುವವರು ದಾಬಾ ಮತ್ತು ಮನೆಯ ಹದಿಮೂರು ಸಾವಿರ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಬಾಕಿ ಪಾವತಿಸದ ಹಿನ್ನೆಲೆ ಲೈನ್​ ಕಟ್ ಮಾಡಲಾಗಿತ್ತು. ಹಾಗಾಗಿ ಜೆಇ ಮತ್ತು ಲೈನಮ್ಯಾನ್​​ ಮೇಲೆ ಹಲ್ಲೆ ಮಾಡಿದ್ದಾರೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

Join Whatsapp