Home ಕರಾವಳಿ ಪದವಿನಂಗಡಿಯಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ; ಕಾಂಗ್ರೆಸ್, ಬಿಜೆಪಿ ತೊರೆದು ತೆನೆಹೊತ್ತ ಮುಖಂಡರು

ಪದವಿನಂಗಡಿಯಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ; ಕಾಂಗ್ರೆಸ್, ಬಿಜೆಪಿ ತೊರೆದು ತೆನೆಹೊತ್ತ ಮುಖಂಡರು

ಮಂಗಳೂರು: ಇಲ್ಲಿನ ಮಲ್ಲಿಕಟ್ಟೆಯ ಸುಮ ಸದನದಲ್ಲಿ ಜೆಡಿಎಸ್ ಪಕ್ಷದ ಮಂಗಳೂರು ದಕ್ಷಿಣ ಕ್ಷೇತ್ರ ವಿಧಾನಸಭಾ ಕ್ಷೇತ್ರದ ಚುನಾವಣೆ ಪೂರ್ವಭಾವಿ  ಕಾರ್ಯಕ್ರಮದಲ್ಲಿ  ಪದವಿನಂಗಡಿ ಭಾಗದ ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ಮುಖಂಡರು ಜೆಡಿಎಸ್ ಪಕ್ಷ ಸೇರ್ಪಡೆಯಾದರು.

 ಡಾ.‌ಸುಮತಿ ಎಸ್. ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ  ರೈತ  ನಾಯಕಿ ಚೈತ್ರಗೌಡ ರವರ ಸಮ್ಮುಖದಲ್ಲಿ ಅಶಾ ಧರ್ಮರಾಜ್ ಅವರ ಸಾರಥ್ಯದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.

       ಈ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಮೀರಾ ಸಾಹೇಬ್ ಕಡಬ, ಜೆಡಿಎಸ್  ಮಂಗಳೂರು ದಕ್ಷಿಣ‌  ವಿಧಾನಸಭಾ ಕ್ಷೇತ್ರ ಉಪಾಧ್ಯಕ್ಷ ಇಝಾ ಬಜಾಲ್, ವಿನ್ಸೆಂಟ್ ಪೆರೇರಾ, ಮಹಿಳಾ ಜಿಲ್ಲಾಧ್ಯಕ್ಷೆ ರಮೀಝಾ ನಾಸಿರ್, ರಾಜ್ಯ ಮಹಿಳಾ ಕಾರ್ಯದರ್ಶಿ  ಶ್ರೀಮಣಿ ಶೆಟ್ಟಿ ಭಾರತೀ ಪುಷ್ಪರಾಜನ್, ವೀಣಾ ಶೆಟ್ಟಿ,‌  ಉಷಾ ಟೀಚರ್, ಲತೀಫ್ ಶಿವಭಾಗ್ , ಜಾವೇದ್ ಪಾಂಡೇಶ್ವರ, ಮುಹಮ್ಮದ್ ಶಫೀಕ್‌ ಆಲಡ್ಕ, ದಿನೇಶ್ ಪೈಸ್ ಪಡೀಲ್,  ರಫೀಕ್ ಕಣ್ಣೂರು, ಪ್ರಿಯಾ ಸಾಲಿಯಾನ್ , ಕವಿತಾ, ಚೂಡಾಮಣಿ ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಜೆಡಿಎಸ್ ಮಂಗಳೂರು ದಕ್ಷಿಣ ವಿಧಾನಸಭಾ ಕಾರ್ಯದರ್ಶಿ ಅಲ್ತಾಫ್ ತುಂಬೆ ಸ್ವಾಗತಿಸಿದರು.

Join Whatsapp
Exit mobile version