Home ಟಾಪ್ ಸುದ್ದಿಗಳು ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಕರೆ

ಕರ್ನಾಟಕ ಬಂದ್ ಯಶಸ್ವಿಗೊಳಿಸಲು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಕರೆ

ಮಂಗಳೂರು: ಹಿಜಾಬ್ ತೀರ್ಪಿನ ವಿರುದ್ಧ ನಾಳೆಯ ಸ್ವಯಂಪ್ರೇರಿತ ಕರ್ನಾಟಕ ಬಂದ್ ಅನ್ನು ಯಶಸ್ವಿಗೊಳಿಸಲು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಕರೆ ನೀಡಿದೆ.

ಇಸ್ಲಾಮೀ ವಿದ್ವಾಂಸರು ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳ ನಾಯಕರು ಕರ್ನಾಟಕ ಹೈಕೋರ್ಟ್ ಹಿಜಾಬಿನ ಕುರಿತಾದ ತೀರ್ಪು ಸಮ್ಮತಾರ್ಹವಲ್ಲ ಎಂದು ಬಣ್ಣಿಸಿದ್ದು, ಇದರ ವಿರುದ್ಧವಾಗಿ ಕರೆಕೊಟ್ಟಿರುವ ಕರ್ನಾಟಕ ಬಂದ್ ಯಶಸ್ವಿಗೊಳಿಸಬೇಕೆಂದು ಜಇ ಹಿಂದ್ ಮಂಗಳೂರು ವಲಯ ಕರೆಕೊಟ್ಟಿದೆ.

ಹೈಕೋರ್ಟ್ ತೀರ್ಪು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದು, ಈ ಕುರಿತು ಕರೆಕೊಡಲಾಗಿರುವ ಸ್ವಯಂಪ್ರೇರಿತ ಬಂದ್ ಅನ್ನು ಜನತೆಯು ಯಶಸ್ವಿಗೊಳಿಸುವಂತೆ ಮಂಗಳೂರು ವಲಯದ ಮೂರು ಜಿಲ್ಲಾ ಸಂಚಾಲಕರಾದ ಅಮೀನ್ ಅಹ್ಸನ್ (ದ.ಕ ಜಿಲ್ಲೆ), ಅಬ್ದುಲ್ ಅಝೀಝ್( ಉಡುಪಿ ಜಿಲ್ಲೆ), ಅಬ್ದುರ್ರಹಮಾನ್(ಕೊಡಗು ಜಿಲ್ಲೆ) ಜಂಟಿ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

Join Whatsapp
Exit mobile version