Home ಟಾಪ್ ಸುದ್ದಿಗಳು ರೈಲ್ವೆ ಸೇತುವೆ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ವೇಳೆ ಮಣ್ಣು ಕುಸಿತ : ಸಚಿವ ಜಗದೀಶ್ ಶೆಟ್ಟರ್...

ರೈಲ್ವೆ ಸೇತುವೆ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ವೇಳೆ ಮಣ್ಣು ಕುಸಿತ : ಸಚಿವ ಜಗದೀಶ್ ಶೆಟ್ಟರ್ ಅಪಾಯದಿಂದ ಪಾರು

ಹುಬ್ಬಳ್ಳಿ : ಸಚಿವ ಜಗದೀಶ್ ಶೆಟ್ಟರ್ ಇಲ್ಲಿನ ದೇಶಪಾಂಡೆ ನಗರದ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ವೇಳೆ ಮಣ್ಣು ಕುಸಿದು, ಆತಂಕದ ವಾತಾವರಣ ಸೃಷ್ಟಿಯಾದ ಬಗ್ಗೆ ವರದಿಯಾಗಿದೆ.

ಶೆಟ್ಟರ್ ಅವರು ಸೇತುವೆ ಕೆಳಗಡೆ ಹೋದಾಗ ಜೆಸಿಬಿ ಕೆಲಸ ಮುಂದುವರಿಸಿದ್ದರಿಂದ ಮೇಲಿನ ಮಣ್ಣು ಕುಸಿಯಿತು. ಭಾರೀ ದೂಳು ಎದ್ದಿದ್ದರಿಂದ ಗೊಂದಲ ಉಂಟಾಯಿತು ಎಂದು ವರದಿಗಳು ತಿಳಿಸಿವೆ.

ಫೋಟೊ ತೆಗೆಯಲು ನಿಂತಿದ್ದ ಫೋಟೊಗ್ರಾಫರ್ ಗಳನ್ನು ಬದಿಗೆ ಸರಿಸಲಾಯಿತು. ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ವರದಿಯಾಗಿದೆ.  

Join Whatsapp
Exit mobile version