Home ಟಾಪ್ ಸುದ್ದಿಗಳು ಮನುಷ್ಯತ್ವ ಇಲ್ಲದ ಪಡ್ಡೆಗಳು ಸಂಸದರಾಗಿದ್ದು ದುರಂತ: ತೇಜಸ್ವಿ ಸೂರ್ಯ ವಿರುದ್ಧ ಎಎಪಿ ಕಿಡಿ

ಮನುಷ್ಯತ್ವ ಇಲ್ಲದ ಪಡ್ಡೆಗಳು ಸಂಸದರಾಗಿದ್ದು ದುರಂತ: ತೇಜಸ್ವಿ ಸೂರ್ಯ ವಿರುದ್ಧ ಎಎಪಿ ಕಿಡಿ

ಬೆಂಗಳೂರು: “ಕನ್ನಡನಾಡಿಗೆ ಕಷ್ಟ ಬಂದಾಗಲೆಲ್ಲಾ ಬಿಜೆಪಿಯವರು ಸೌಜನ್ಯ ಮರೆತು, ಮನುಷ್ಯತ್ವ ಇಲ್ಲದೇ ನಡೆದುಕೊಳ್ಳುತ್ತಾರೆ ಎಂಬುದನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತೆ ತೋರಿಸಿಕೊಟ್ಟಿದ್ದಾರೆ” ಎಂದು ಆಪ್ ಯುವ ಘಟಕದ ಅಧ್ಯಕ್ಷ ಮುಕುಂದ್ ಗೌಡ ತಮ್ಮ ಟ್ವೀಟ್ ನಲ್ಲಿ ಕಿಡಿಕಾರಿದ್ದಾರೆ.


ಸಾಮಾಜಿಕ ಜಾಲತಣದಲ್ಲಿ ಕಾಣಿಸುತ್ತಿರುವ ಸೂರ್ಯ ಅವರ ವಿಡಿಯೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಬೆಂಗಳೂರಿನ ಬಹುಭಾಗ ಮಳೆಹಾನಿಯಿಂದ ತತ್ತರಿಸಿ ಹೋಗಿರುವಾಗ ಯಾವುದೋ ಹೋಟೆಲ್ ನ ಊಟ ಸವಿದು ಅದರ ಪ್ರಚಾರ ಮಾಡಲು ಹೊರಟಿರುವುದು ಅತಿರೇಕ ಮತ್ತು ಅಸಹ್ಯದ ವರ್ತನೆ ನಾಚಿಕೆಗೇಡಿನದ್ದು. ಬಿಜೆಪಿಯ ಬಾಲಿಶ ರಾಜಕಾರಣಕ್ಕೆ ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ ಎಂದರು”.


” ಇಡೀ ಬಿಜೆಪಿ ಶಾಸಕರು ಸಚಿವರೊಂದಿಗೆ ಸಂಸದರೂ 40% ಕಮಿಷನ್ ಫಲಾನುಭವಿಗಳಾಗಿ ಇಂದು ನಗರ ಕೊಚ್ಚಿಹೋಗಲು ಕಾರಣರಾಗಿದ್ದಾರೆ, ಇಂಥವರನ್ನು ಪಡೆದದ್ದು ಬೆಂಗಳೂರಿನ ದೌರ್ಭಾಗ್ಯ” ಎಂದರು.

Join Whatsapp
Exit mobile version