ಕರ್ನಾಟಕದ ಕಾಂಗ್ರೆಸ್ ಅನ್ನು ವಿಸರ್ಜಿಸಿ, ಕೋಮುವಾದಿಗಳ ಜೊತೆಗೆ ವಿಲೀನ ಮಾಡುವುದು ಒಳ್ಳೆಯದು: ಎಚ್.ಡಿ.ರೇವಣ್ಣ

Prasthutha|

ಹಾಸನ: ಕೋಮುವಾದಿ ಪಕ್ಷಗಳ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಪಕ್ಷವನ್ನು ವಸರ್ಜಿಸುವುದು ಒಳಿತು ಎಂದು ಶಾಸಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಬೇರೆ, ಈಗಿರುವ ಕಾಂಗ್ರೆಸ್ ಪಕ್ಷವೇ ಬೇರೆ. ಈಗಿರುವ ಕಾಂಗ್ರೆಸ್ ಹೊಂದಾಣಿಕೆಯ ರಾಜಕಾರಣ ಮಾಡುತ್ತಿದ್ದು, ಬೇಕೆಂದಾಗ ಕೋಮುವಾದಿಗಳ ಜೊತೆಗೂ ಕೈಜೋಡಿಸುತ್ತದೆ ಎಂದು ಹರಿಹಾಯ್ದರು.


ಮಹಾತ್ಮ ಗಾಂಧೀಜಿಯವರ ಸಲಹೆಯಂತೆ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವುದು ಒಳ್ಳೆಯದು. ಈಗಿರುವ ಕಾಂಗ್ರೆಸ್ ಆಗಿನದ್ದಲ್ಲ ಎಂದರು.
ರಾಷ್ಟ್ರೀಯ ಕಾಂಗ್ರೆಸ್’ನ ಗೌರವ ಉಳಿಯಬೇಕಾದರೆ, ಕರ್ನಾಟಕದ ಕಾಂಗ್ರೆಸ್ ಅನ್ನು ವಿಸರ್ಜಿಸಿ, ಕೋಮುವಾದಿಗಳ ಜೊತೆಗೆ ವಿಲೀನ ಮಾಡುವುದು ಒಳ್ಳೆಯದು ಎಂದರು.

Join Whatsapp