RSS ಬರೋದಕ್ಕೂ ಮುಂಚೆ ದೇಶದಲ್ಲಿ ಸಂಸ್ಕೃತಿ ಇರಲಿಲ್ವ: HDK ವಾಗ್ದಾಳಿ

Prasthutha|

ವಿಜಯಪುರ: ಆರ್‌ಎಸ್ಎಸ್‌ ಪ್ರಾಯೋಜಿತ ಬಿಜೆಪಿ ಸರ್ಕಾರದ ವಿರುದ್ಧ ಎಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದು, ಆರ್‌ಎಸ್ಎಸ್‌ ಬರೋದಕ್ಕೂ ಮುಂಚೆ ದೇಶದಲ್ಲಿ ಸಂಸ್ಕೃತಿ ಇರಲಿಲ್ವ, ಸಂಸ್ಕೃತಿಯನ್ನ ಜನತೆ ಉಳಿಸಿರಲಿಲ್ವಾ, ಆರ್‌ಎಸ್ಎಸ್​ನವರು ಯಾವ ಸಂಸ್ಕೃತಿ ಉಳಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

- Advertisement -

ಈ ಬಗ್ಗೆ ವಿಜಯಪುರದಲ್ಲಿ ಮಾತಾಡಿದ ಮಾಜಿ ಸಿಎಂ ಹೆಚ್​ಡಿಕೆ, ಧರ್ಮದ ಹೆಸರಿನಲ್ಲಿ ಪಠ್ಯದ ಗೊಂದಲ ಸೃಷ್ಟಿಸುತ್ತಿದ್ದಾರೆ, ಇವರಿಂದ ನಾವು ಸಂಸ್ಕೃತಿ ಕಲಿಯಬೇಕಿಲ್ಲ. ಸರ್ಕಾರ ನಡೆಸುವವರು ಕೈಯಿಂದ ಬಾಚುತ್ತಿಲ್ಲ, ಬುಲ್ಡೋಝರಿನಿಂದ ಸರ್ಕಾರದ ಸಂಪತ್ತನ್ನು ಬಗೆಯುತ್ತಿದ್ದಾರೆ. ಇದು ಆರ್‌ಎಸ್ಎಸ್‌ ಸಂಸ್ಕೃತಿನಾ , ಇದನ್ನೇ ಆರ್​ಎಸ್​ಎಸ್​ ಕಲಿಸ್ತಿರೋದಾ ಎಂದು ವಾಗ್ದಾಳಿ ನಡೆಸಿದ್ದಾರೆ.

Join Whatsapp