ಪಬ್ ಗೆ ನುಗ್ಗಲು ಬಜರಂಗ ದಳಕ್ಕೆ ಮಾತ್ರವಾ, ಬೇರೆ ರಾಜಕೀಯ ಕಾರ್ಯಕರ್ತರಿಗೂ ಅವಕಾಶ ಇದೆಯೆ?: ಮುನೀರ್ ಕಾಟಿಪಳ್ಳ

Prasthutha|

ಮಂಗಳೂರು: ಪಬ್ ಮೇಲೆ ಬಜರಂಗ ದಳದ ದಾಳಿ ಕುರಿತು ಪೊಲೀಸ್ ಕಮಿಷನರ್ ತುಂಬಾ ಮೃದುವಾಗಿ ಪ್ರತಿಕ್ರಿಯಿಸಿದ್ದಾರೆ. ಲೈಸನ್ಸ್ ಹೊಂದಿರುವ ಯಾವುದೇ ರೆಸ್ಟೋರೆಂಟ್, ಪಬ್ ಗಳಿಗೆ ತೆರಳಿ ಅಲ್ಲಿನ ಗ್ರಾಹಕರನ್ನು ಹೊರಗೆ ಕರೆಸುವ, ಪರಿಶೀಲನೆ ನಡೆಸುವ ಅಧಿಕಾರ ಸಂಘಟನೆಗಳಿಗೆ ಕೊಟ್ಟವರು ಯಾರು ? ಈ ಅಧಿಕಾರ ಬಜರಂಗ ದಳಕ್ಕೆ ಮಾತ್ರವಾ, ಅಥವಾ ಬೇರೆ ರಾಜಕೀಯ ಕಾರ್ಯಕರ್ತರಿಗೂ ಈ ಅವಕಾಶ ಇದೆಯೆ ? ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

- Advertisement -

ಬೇರೆ ಸಂಘಟನೆಗಳು ಇದೇ ರೀತಿ ನಡೆದು ಕೊಂಡರೆ ಕಮಿಷನರ್ ಪ್ರತಿಕ್ರಿಯೆ ಹೀಗೆಯೆ ಇರುತ್ತದೆಯೇ ? ಬೀದಿಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಮಾಧ್ಯಮಗಳ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಜರಂಗ ದಳದ ಕಾರ್ಯಕರ್ತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಲೇಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಮಂಗಳೂರಿನ ವೀರಾಧಿ ವೀರ ಶಾಸಕರು ಈ ಕುರಿತು ಏನಾೆದರು ಪ್ರತಿಕ್ರಿಯಿಸಿದರಾ ? ಬಜರಂಗ ದಳದ ನಿಲುವು ಸರಿ ಎಂದಾದರೆ ಮಂಗಳೂರಿನ ಎಲ್ಲಾ ಪಬ್ ಗಳನ್ನು ಬಾಗಿಲು ಮುಚ್ಚಿಸಲು ಒಂದು ದೃಢ ತೀರ್ಮಾನವನ್ನು ಬಿಜೆಪಿ ಪಕ್ಷ, ಶಾಸಕರು, ಸಂಸದ ನಳಿನ್ ಕುಮಾರ್ ಕಟೀಲ್ ರು ತೆಗೆದುಕೊಳ್ಳಲಿ ಎಂದು ಮುನೀರ್ ಕಾಟಿಪಳ್ಳ ಸವಾಲು ಹಾಕಿದ್ದಾರೆ.

Join Whatsapp
Exit mobile version