ಅಂತರ್ ಜಾತಿ ಪ್ರೇಮಿಗಳಿಗೆ ಪೋಷಕರ ಬೆದರಿಕೆ | ಪ್ರಾಣರಕ್ಷಣೆಗಾಗಿ ಎಸ್ಪಿ ಭೇಟಿಯಾದ ಯುವಜೋಡಿ

Prasthutha|

ಚಿತ್ರದುರ್ಗ : ಅಂತರ್ ಜಾತಿ ವಿವಾಹವಾದ ಜೋಡಿಗೆ ಜೀವ ಬೆದರಿಕೆಯಿರುವ ಬಗ್ಗೆ ವರದಿಯಾಗಿದೆ. ಚಿತ್ರದುರ್ಗದ ಗೌತಮಿ ಮತ್ತು ಅಮಿತ್ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಜಾತಿಯ ಕಾರಣ ನೀಡಿ ಇವರ ಮನೆಯವರು ಮದುವೆಗೆ ನಿರಾಕರಿಸಿದ್ದರು.

- Advertisement -

ಈ ಸಂಬಂಧ ಎರಡು ಬಾರಿ ಪೊಲೀಸ್ ಠಾಣೆ ಮೆಟ್ಟಿಲೂ ಏರಿಯಾಗಿತ್ತು. ಆದರೆ, ಕೊನೆಗೆ ಗೌತಮಿ ಮತ್ತು ಅಮಿತ್ ಚನ್ನಪಟ್ಟಣದ ಸಮೀಪದ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಅಮಿತ್ ಪರಿಶಿಷ್ಟ ಜಾತಿಗೆ ಸೇರಿದವನು ಎನ್ನುವುದು ಗೌತಮಿ ಮನೆಯವರ ಆಕ್ಷೇಪ. ಹೀಗಾಗಿ ಅಮಿತ್ ಮನೆಯವರೂ ಈ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ.

ಹೀಗಾಗಿ ಮನೆಬಿಟ್ಟು ಹೋಗಿ ವಿವಾಹವಾದ ಜೋಡಿ, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ನವ ಜೀವನ ಆರಂಭಿಸುವ ಕನಸಿನಲ್ಲಿದ್ದರು. ಆದರೆ, ಮಗಳು ಕಾಣೆಯಾಗಿದ್ದಾಳೆ ಎಂದು ಗೌತಮಿ ಹೆತ್ತವರು ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾರೆ. ನೀವು ಎಲ್ಲೇ ಇದ್ದರೂ, ಬಿಡುವುದಿಲ್ಲ ಎಂದು ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ ಎನ್ನಲಾಗಿದೆ. ಪೊಲೀಸರೂ ಗೌತಮಿಯ ಹೆತ್ತವರಿಗೆ ಬೆಂಬಲಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

ಇದರಿಂದ ಆತಂಕಕ್ಕೆ ಒಳಗಾಗಿರುವ ಯುವಜೋಡಿ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಅವರನ್ನು ಭೇಟಿಯಾಗಿ ಪ್ರಾಣ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಎಸ್ಪಿ ಜಿ. ರಾಧಿಕಾ ಅವರು ಜೋಡಿಗೆ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.

Join Whatsapp