Home ಟಾಪ್ ಸುದ್ದಿಗಳು ವಾರಾಹಿ ನದಿ ಬದಲು ವಾರಾ ಎಂದೇಳಿದ ಸಚಿವ ಭೈರತಿ ಬಸವರಾಜು !

ವಾರಾಹಿ ನದಿ ಬದಲು ವಾರಾ ಎಂದೇಳಿದ ಸಚಿವ ಭೈರತಿ ಬಸವರಾಜು !

ಬೆಳಗಾವಿ: ನಾನು ಇಲ್ಲಿ ಇದ್ದೀನಿ ನೋಡಿರಿ ಎಂದು ಹಿರಿಯ ಸದಸ್ಯರೊಬ್ಬರಿಗೆ ಹೇಳಿ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಸ್ಯ ಚಟಾಕಿ ಹಾರಿಸಿದರು.


ನಗರದಲ್ಲಿಂದು ಸುವರ್ಣಸೌಧದ ಪರಿಷತ್ತಿನ ಕಲಾಪದಲ್ಲಿ ಹಿರಿಯ ಸದಸ್ಯ ಕೆ.ಪ್ರತಾಪ ಚಂದ್ರಶೆಟ್ಟಿ ಅವರು ತಮ್ಮ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಕಡೆ ತಿರುಗಿ ಸಭಾಪತಿಗಳೇ, ಸಭಾಪತಿಗಳೇ ಎಂದು ಪದೇ ಪದೇ ಉಲ್ಲೇಖಿಸುತ್ತಿದ್ದರು.


ಆಗ, ಸಭಾಪತಿ ಬಸವರಾಜ ಹೊರಟ್ಟಿ ಅವರು, ನಾನು ಈ ಕಡೆ ಇದೀನಿ ನೋಡ್ರಿ ಎಂದರು.ಆಗ ಸದನದಲ್ಲಿ ನಗೆಯ ವಾತಾವರಣ ಕಂಡಿತು. ಇದೇ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಉಡುಪಿಯ ಕುಡಿಯುವ ವಿಚಾರವಾಗಿ ವಾರಾಹಿ ನದಿ ಬದಲು ವಾರಾ ಎಂದೇ ಹೇಳುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಸದಸ್ಯರು, ಅದು ವಾರಾವಲ್ಲ, ವಾರಾಹಿ ನದಿ.ಇದನ್ನು ತಿಳಿದುಕೊಳ್ಳಿ ಅಥವಾ ನೋಡಿಬನ್ನಿ ಎಂದು ಸಲಹೆ ನೀಡಿದರು.

Join Whatsapp
Exit mobile version