ವಾರಾಹಿ ನದಿ ಬದಲು ವಾರಾ ಎಂದೇಳಿದ ಸಚಿವ ಭೈರತಿ ಬಸವರಾಜು !

Prasthutha|

ಬೆಳಗಾವಿ: ನಾನು ಇಲ್ಲಿ ಇದ್ದೀನಿ ನೋಡಿರಿ ಎಂದು ಹಿರಿಯ ಸದಸ್ಯರೊಬ್ಬರಿಗೆ ಹೇಳಿ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹಾಸ್ಯ ಚಟಾಕಿ ಹಾರಿಸಿದರು.

- Advertisement -


ನಗರದಲ್ಲಿಂದು ಸುವರ್ಣಸೌಧದ ಪರಿಷತ್ತಿನ ಕಲಾಪದಲ್ಲಿ ಹಿರಿಯ ಸದಸ್ಯ ಕೆ.ಪ್ರತಾಪ ಚಂದ್ರಶೆಟ್ಟಿ ಅವರು ತಮ್ಮ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಕಡೆ ತಿರುಗಿ ಸಭಾಪತಿಗಳೇ, ಸಭಾಪತಿಗಳೇ ಎಂದು ಪದೇ ಪದೇ ಉಲ್ಲೇಖಿಸುತ್ತಿದ್ದರು.


ಆಗ, ಸಭಾಪತಿ ಬಸವರಾಜ ಹೊರಟ್ಟಿ ಅವರು, ನಾನು ಈ ಕಡೆ ಇದೀನಿ ನೋಡ್ರಿ ಎಂದರು.ಆಗ ಸದನದಲ್ಲಿ ನಗೆಯ ವಾತಾವರಣ ಕಂಡಿತು. ಇದೇ ವೇಳೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರು ಉಡುಪಿಯ ಕುಡಿಯುವ ವಿಚಾರವಾಗಿ ವಾರಾಹಿ ನದಿ ಬದಲು ವಾರಾ ಎಂದೇ ಹೇಳುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಸದಸ್ಯರು, ಅದು ವಾರಾವಲ್ಲ, ವಾರಾಹಿ ನದಿ.ಇದನ್ನು ತಿಳಿದುಕೊಳ್ಳಿ ಅಥವಾ ನೋಡಿಬನ್ನಿ ಎಂದು ಸಲಹೆ ನೀಡಿದರು.

Join Whatsapp