ಇನ್ನು ಮುಂದೆ ಬಡವರ, ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸುವೆ: ಆರ್ಯನ್‌ ಖಾನ್

Prasthutha|

ಮುಂಬೈ: ಡ್ರಗ್ಸ್‌ ಕೇಸ್ ನಲ್ಲಿ ಬಂಧನಕ್ಕೊಳಗಾಗಿರುವ, ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಗೆ ಶನಿವಾರ, ಎನ್‌ ಸಿಬಿ ಕಚೇರಿಯಲ್ಲಿ ಆರ್ಯನ್‌ ಗೆ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆಪ್ತ ಸಮಾಲೋಚನೆ ನಡೆಸಲಾಯಿತು.

- Advertisement -


ಅಧಿಕಾರಿಗಳು, ತಜ್ಞರು ನೀಡಿದ ಸಲಹೆ ಸ್ವೀಕರಿಸಿದ ಆರ್ಯನ್‌, ಮುಂದೆ ತನ್ನೆಲ್ಲಾ ದುಶ್ಚಟಗಳನ್ನು ಬಿಡುವುದಾಗಿ ವಾಗ್ಧಾನ ನೀಡಿದ್ದಾನೆ. ಮುಂದಿನ ದಿನಗಳಲ್ಲಿ ತಾನು ಸಮಾಜದ ಬಡವರ, ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸುವುದಾಗಿ ತಿಳಿಸಿದ್ದಾನೆ. ಜತೆಗೆ, ಡ್ರಗ್ಸ್‌ ಪ್ರಕರಣ ಭೇದಿಸಿರುವ ಎನ್‌ ಸಿಬಿ ಪ್ರಾಂತೀಯ ಆಯುಕ್ತ ಸಮೀರ್‌ ವಾಂಖೆಡೆಯವರೇ ಮುಂದೊಂದು ದಿನ ತಮ್ಮನ್ನು ಮೆಚ್ಚಿಕೊಳ್ಳುವಂಥ ಕಾರ್ಯ ಮಾಡುವುದಾಗಿ ತಿಳಿಸಿದ್ದಾನೆ

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇಲೆ.ಎನ್ ಸಿಬಿ ಅಧಿಕಾರಿಗಳು ಆತನನ್ನು ಬಂಧಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

Join Whatsapp