ಅನಿವಾರ್ಯ ಆದರೆ ಲಾಕ್ ಡೌನ್, ರಾಜ್ಯದಲ್ಲಿ ಆ ಪರಿಸ್ಥಿತಿ ಇಲ್ಲ: ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ಲಾಕ್ ಡೌನ್  ಮಾಡಬಾರದು ಅಂತಾ ಬಹಳಷ್ಟು ಜನ ಗೋಳಾಡುತ್ತಿದ್ದಾರೆ. ಈವರೆಗೂ ಆ ಪರಿಸ್ಥಿತಿ ಬಂದಿಲ್ಲ. ಆದರೆ, ಪರಿಸ್ಥಿತಿ ಕೈ ಮೀರಿದರೆ ಏನೂ ಮಾಡಲು ಸಾಧ್ಯವಿಲ್ಲ. ಜನರ ಪ್ರಾಣ ಮುಖ್ಯ, ಅನಿವಾರ್ಯ ಆದರೆ ಲಾಕ್ ಡೌನ್  ಮಾಡಲಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -

ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಬಹಳ ವೇಗವಾಗಿ ಹಬ್ಬುತ್ತಿದೆ. ಲಾಕ್ ಡೌನ್  ಮಾಡಿದರೆ ಬಹಳ ದೊಡ್ಡ ಹೊಡೆತ ಬೀಳುತ್ತದೆ. ಕಳೆದ ಬಾರಿ ಲಾಕ್ ಡೌನ್  ಮಾಡಿ ಎಷ್ಟು ಸಮಸ್ಯೆ ಅನುಭವಿಸಿದ್ದೇವೆ ಅಂತಾ ಗೊತ್ತಿದೆ. ಬೆಂಗಳೂರು ರಾಜ್ಯದಲ್ಲೇ ಹಾಟ್ ಸ್ಪಾಟ್ ಆಗಿದೆ. ಲಾಕ್ ಡೌನ್  ಕೊನೆಯ ಅವಕಾಶ, ಲಾಕ್ ಡೌನ್  ಮಾಡಬಾರದು ಅಂತಾ ಬಹಳಷ್ಟು ಜನ ಗೋಳಾಡುತ್ತಿದ್ದಾರೆ ಎಂದು ಹೇಳಿದರು.

Join Whatsapp