Home ಟಾಪ್ ಸುದ್ದಿಗಳು ಎಂಟು ಮಂದಿ ನೌಕಾಪಡೆಯ ಮಾಜಿ ಸಿಬ್ಬಂದಿಗೆ ಕತಾರ್ ಮರಣದಂಡನೆ: ಮೇಲ್ಮನವಿ ಸಲ್ಲಿಸಿದ ಭಾರತ

ಎಂಟು ಮಂದಿ ನೌಕಾಪಡೆಯ ಮಾಜಿ ಸಿಬ್ಬಂದಿಗೆ ಕತಾರ್ ಮರಣದಂಡನೆ: ಮೇಲ್ಮನವಿ ಸಲ್ಲಿಸಿದ ಭಾರತ

ನವದೆಹಲಿ: ಕತಾರ್ ನ್ಯಾಯಾಲಯವು ಎಂಟು ಮಂದಿ ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿದ್ದು, ತೀರ್ಪು ಮರುಪರಿಶೀಲಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.


ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಮಂಗಳವಾರ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಬಂಧಿತ ಭಾರತೀಯರಿಗೆ ಮತ್ತೊಮ್ಮೆ ಕಾನ್ಸುಲರ್ ಪ್ರವೇಶ ನೀಡಲಾಗಿದೆ. ಭಾರತವು ಅವರಿಗೆ ಎಲ್ಲಾ ಕಾನೂನು ಮತ್ತು ರಾಜತಾಂತ್ರಿಕ ನೆರವು ನೀಡುವುದನ್ನು ಮುಂದುವರಿಸುತ್ತದೆ ಎಂದರು.

Join Whatsapp
Exit mobile version