Home ಟಾಪ್ ಸುದ್ದಿಗಳು ಇಂಡಿಯಾ ನಿಯೋಗವು ಮಣಿಪುರ ಜನರ ಕಣ್ಣೀರು ಒರೆಸಿ ಬಂದಿದೆ: ರಾಘವ್ ಚಡ್ಡಾ

ಇಂಡಿಯಾ ನಿಯೋಗವು ಮಣಿಪುರ ಜನರ ಕಣ್ಣೀರು ಒರೆಸಿ ಬಂದಿದೆ: ರಾಘವ್ ಚಡ್ಡಾ

ನವದೆಹಲಿ: ಇಂಡಿಯಾ ನಿಯೋಗವು ಕಲಹ ಪೀಡಿತ ಮಣಿಪುರಕ್ಕೆ ಭೇಟಿ ನೀಡಿ ”ಮಣಿಪುರದ ಜನರ ಕಣ್ಣೀರು ಒರೆಸಿದ ನಂತರ ಹಿಂತಿರುಗಿದ್ದಾರೆ” ಎಂದು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಶ್ಲಾಘಿಸಿದ್ದಾರೆ.


ಮಣಿಪುರದ ಪರಿಸ್ಥಿತಿ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದ ಮುಂದಿನ ಕಾರ್ಯತಂತ್ರದ ಕುರಿತು 21 ಸಂಸದ ನಿಯೋಗವು ಉಳಿದ ಪ್ರತಿಪಕ್ಷಗಳ ಸದಸ್ಯರಿಗೆ ವಿವರಿಸಲು ಸಭೆ ನಡೆಸಲಾಯಿತು. ಈ ಸಭೆಯ ಬಳಿಕ ಮಣಿಪುರದ ಬಗ್ಗೆ ಪ್ರತಿಪಕ್ಷಗಳ ಮುಂದಿನ ನಡೆಯ ಬಗ್ಗೆ ನಿಯೋಗ ತಿಳಿಸಲಿದೆ ಎಂದು ಚಾಡಾ ಹೇಳಿದರು.

”ಮಣಿಪುರದ ಜನರ ಕಣ್ಣೀರು ಒರೆಸಿದ ನಂತರ INDIAದ ನಿಯೋಗ ಮರಳಿದೆ. ಇಂದು, ಸಂಸದರು ಸಭೆಯಲ್ಲಿ ಮಣಿಪುರದ ಪರಿಸ್ಥಿತಿಯನ್ನು ವಿವರಿಸುತ್ತಾರೆ, ನಂತರ ನಾವು ಈ ನಿಟ್ಟಿನಲ್ಲಿ ನಮ್ಮ ಮುಂದಿನ ನಡೆಯ ಬಗ್ಗೆ ನಿಮಗೆ ತಿಳಿಸುತ್ತೇವೆ…” ಎಂದು ಹೇಳಿದರು.

Join Whatsapp
Exit mobile version