ಇಂಡಿಯಾ ಮೈತ್ರಿಕೂಟ ಸನಾತನ ಸಂಸ್ಕೃತಿ ನಾಶ ಮಾಡಲು ಸಂಚು ರೂಪಿಸಿದೆ: ಪ್ರಧಾನಿ ನರೇಂದ್ರ ಮೋದಿ

Prasthutha|

ಹೊಸದಿಲ್ಲಿ: ಇಂಡಿಯಾ (I.N.D.I.A) ಮೈತ್ರಿಕೂಟ ಭಾರತದ ಸನಾತನ ಸಂಸ್ಕೃತಿಯನ್ನು ನಾಶ ಮಾಡುವ ಸಂಚು ರೂಪಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ (ಸೆಪ್ಟೆಂಬರ್‌ 14) ವಾಗ್ದಾಳಿ ನಡೆಸಿದರು.

- Advertisement -

ಅವರು ಚುನಾವಣೆಗೆ ಸಜ್ಜಾಗುತ್ತಿರುವ ಮಧ್ಯಪ್ರದೇಶದ ಬೀನಾ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ವಿಪಕ್ಷಗಳ ಮೈತ್ರಿಕೂಟಕ್ಕೆ ನಾಯಕನೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂದು ಈ ವೇಳೆ ವ್ಯಂಗ್ಯವಾಡಿದರು.

ಈ ಇಂಡಿಯಾ ಮೈತ್ರಿಕೂಟಕ್ಕೆ ಯಾವ ನಾಯಕನೂ ಇಲ್ಲ. ಆದರೆ ಅವರು ಭಾರತದ ಸಂಸ್ಕೃತಿಯ ಮೇಲೆ ದಾಳಿ ನಡೆಸುವ ರಹಸ್ಯ ಅಜೆಂಡಾ ಹೊಂದಿವೆ. ಅಷ್ಟೇ ಅಲ್ಲ ಇಂಡಿಯಾ ಮೈತ್ರಿಕೂಟ ಸನಾತನ ಸಂಸ್ಕೃತಿಯನ್ನು ನಾಶಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಪ್ರಧಾನಿ ಮೋದಿ ದೂರಿದರು.



Join Whatsapp
Exit mobile version