Home ಟಾಪ್ ಸುದ್ದಿಗಳು ಮುರುಘಾ ಸ್ವಾಮಿಯ ಪ್ರಕರಣದ ಬೆನ್ನಲ್ಲೇ ರಾಜ್ಯದ ಮತ್ತೊಬ್ಬ ಸ್ವಾಮಿಯ ಕರಾಳ ಮುಖ‌ ಬಹಿರಂಗ

ಮುರುಘಾ ಸ್ವಾಮಿಯ ಪ್ರಕರಣದ ಬೆನ್ನಲ್ಲೇ ರಾಜ್ಯದ ಮತ್ತೊಬ್ಬ ಸ್ವಾಮಿಯ ಕರಾಳ ಮುಖ‌ ಬಹಿರಂಗ

ದಾವಣಗೆರೆ: ಮುರುಘಾ ಸ್ವಾಮಿಯ ಪ್ರಕರಣದ ಬೆನ್ನಲ್ಲೇ ರಾಜ್ಯದ ಮತ್ತೊಬ್ಬ ಸ್ವಾಮಿಯ ಕರಾಳ ಮುಖ‌ ಬಹಿರಂಗವಾಗಿದೆ.


ಅವರಗೊಳ್ಳ ರೇಣುಕಾಶ್ರಮದ ಓಂಕಾರ ಶಿವಾಚಾರ್ಯ ಸ್ವಾಮಿ ನಮ್ಮ ಸಂಸಾರಕ್ಕೆ ಕೊಳ್ಳಿ ಇಟ್ಟಿದ್ದಾರೆ ಎಂದು ಯುವಕನೋರ್ವ ಮಾಧ್ಯಮಗಳ ಮುಂದೆ ಸ್ಫೋಟಕ ಹೇಳಿಕೆ ನೀಡಿದ್ದಾನೆ. ತನ್ನ ಪತ್ನಿಯ ಜೊತೆ ಓಂಕಾರ ಶಿವಾಚಾರ್ಯರ ಸ್ವಾಮಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾನೆ.


ಮೂರು ವರ್ಷಗಳ ಕಾಲ ಪ್ರೀತಿ ಬಳಿಕ ಮದುವೆ ಮಾಡಿಕೊಂಡು 4 ವರ್ಷಗಳ ಕಾಲ ತುಂಬಾ ಚೆನ್ನಾಗಿಯೇ ಇದ್ದೆವು . ಐದು ವರ್ಷಗಳ ಬಳಿಕ, ಮಕ್ಕಳು ಆಗಿಲ್ಲ ಎಂದು ನನ್ನ ಪತ್ನಿ ಆಗಾಗ ದಾವಣಗೆರೆಯಲ್ಲಿರುವ ಮಠಕ್ಕೆ ಹೋಗಲು ಶುರುಮಾಡಿದ್ದಳು ಎಂದು ನೊಂದ ಯುವಕ ಚಂದ್ರಶೇಖರ್‌ ಮಾಧ್ಯಮಗಳ ಮುಂದೆ ಹೇಳಿದ್ದಾರೆ.


ಶಿವಮೊಗ್ಗದಿಂದ ಆಗಾಗ ದಾವಣಗೆರೆಗೆ ಬರುವುದು ತ್ರಾಸದಾಯಕವಾದ ಕಾರಣ ದಾವಣಗರೆಯಲ್ಲೇ ಮನೆ ಮಾಡಿಕೊಡುತ್ತೇವೆ. ಅಲ್ಲೇ ಉಳಿದುಕೊಳ್ಳುವಂತೆ ಪತ್ನಿ ಹಾಗೂ ಆಕೆಯ ತಾಯಿ ತಿಳಿಸಿದ್ದರಿಂದ ನಾನು ಒಪ್ಪಿಗೆ ಸೂಚಿಸಿದ್ದೆ. ನಂತರ ಈ ಸ್ವಾಮೀಜಿಯ ಒತ್ತಾಯದ ಮೇರೆಗೆ ನನ್ನ ಹೆಂಡತಿ ಮಠದಲ್ಲಿ ಸೇವೆ ಮಾಡಲು ಒಪ್ಪಿಕೊಂಡಿದ್ದಾಳೆ.


ಒಂದು ದಿನ ಮಠದಲ್ಲಿ ರೇಣುಕಾ ಜಯಂತಿಯ ವೇಳೆ ಸ್ವಾಮೀಜಿಯ ಅಸಲಿ ಬಣ್ಣ ನಾನು ಕಣ್ಣಾರೆ ಕಂಡೆ. ಆ ದಿನ ರಾತ್ರಿ ಸ್ವಾಮೀಜಿಯ ರೂಮಿಗೆ ಹೋಗಿದ್ದ ನನ್ನ ಹೆಂಡತಿ ತುಂಬಾ ಹೊತ್ತಿನ ಬಳಿಕ ಬಂದಿದ್ದಾಳೆ. ಅದನ್ನು ಪ್ರಶ್ನಿಸಿದಾಗ ಆಕೆ ಬೆವರಲು ಆರಂಭಿಸಿದ್ದಳು. ಇದರಿಂದ ನನಗೆ ಸಂಶಯವುಂಟಾಗಿ ವಿಚಾರಿಸಿದಾಗ ಸ್ವಾಮೀಜಿಗೆ ಕಾಲು ನೋವಿದ್ದರಿಂದ ಒತ್ತುತ್ತಿದ್ದೆ ಎಂದಿದ್ದಾಳೆ. ಕೊನೆಗೆ ಒಂದಿನ ಈ ವಿಚಾರ ಎಲ್ಲರಿಗೂ ಗೊತ್ತಾದಾಗ ನನ್ನ ಹೆಂಡತಿಯನ್ನು ಮಠದಿಂದ ಬಿಡಿಸಲು ಪ್ರಯತ್ನಿಸಿದೆ. ಆದರೆ ಈ ವಿಚಾರ ಎಲ್ಲರಿಗೂ ಗೊತ್ತಾದರೆ ನಾನು ಸಾಯುತ್ತೇನೆ ಎಂದು ಹೆದರಿಸಿದ್ದಾಳೆ. ಕಳೆದ ಒಂದೂವರೆ ವರ್ಷಗಳಿಂದ ನನ್ನ ಪತ್ನಿಯನ್ನು ಸ್ವಾಮೀಜಿ ಬಳಸಿಕೊಳ್ಳುತ್ತಿದ್ದಾರೆ ಎಂದು ಯುವಕ ಚಂದ್ರಶೇಖರ್ ಆರೋಪಿಸಿದ್ದಾರೆ.

Join Whatsapp
Exit mobile version