ಮಂಗಳೂರು: ಸಂಘ ಪರಿವಾರದಿಂದ ಮತ್ತೆ ಅನೈತಿಕ ಗೂಂಡಾಗಿರಿ | ಇಬ್ಬರು ಕಾರ್ಯಕರ್ತರ ಅರೆಸ್ಟ್

Prasthutha|

ಮಂಗಳೂರು: ಇಲ್ಲಿನ ಮೂಡುಬಿದಿರೆ ತಾಲೂಕಿನಲ್ಲಿ ಮತ್ತೊಂದು ಅನೈತಿಕ ಪೊಲೀಸ್ ಗಿರಿ ನಡೆದಿದೆ. ಭಿನ್ನಕೋಮಿನ ಯುವತಿಯರಿಬ್ಬರು ಕಾರಿನಲ್ಲಿದ್ದಾರೆ ಎಂದು 8 ಜನರ ತಂಡವೊಂದು ದಾಳಿ ನಡೆಸಿದೆ‌.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಶಮಿತ್ ರಾಜ್ ಹಾಗೂ ಸಂದೀಪ್ ಪೂಜಾರಿ ಬಂಧಿತ ಆರೋಪಿಗಳು.
ಮೂಡಬಿದಿರೆ ತಾಲೂಕಿನ ಹೊರವಲಯದಲ್ಲಿ ಮಾರುತಿ ಆಲ್ಟೋ ಕಾರಿನಲ್ಲಿ ಓರ್ವ ವ್ಯಕ್ತಿ ಹಾಗೂ ಆತನ ಪತ್ನಿ ಹಾಗೂ ಇಬ್ಬರು ಭಿನ್ನಕೋಮಿನ ಯುವತಿಯರು ಪ್ರಯಾಣ ಬೆಳೆಸಿದ್ದರು. ಭಿನ್ನಕೋಮಿನ ಇಬ್ಬರು ಯುವತಿಯರು ಕಾರಿನಲ್ಲಿದ್ದಾರೆಂಬ ಮಾಹಿತಿ ಪಡೆದುಕೊಂಡ ಎಂಟು ಜನರ ತಂಡವೊಂದು ಕಾರನ್ನು ಅಡ್ಡಗಟ್ಟಿ ದಾಳಿ ನಡೆಸಿದೆ.
ದಾಳಿ ನಡೆಸಿದ ತಂಡ ಕಾರಿನಲ್ಲಿದ್ದವರೊಂದಿಗೆ ಅಗೌರವ ರೀತಿಯಲ್ಲಿ ವರ್ತಿಸಿದೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಮೂಡುಬಿದಿರೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ 354, 153a, 504, 506 ಕಲಂ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆದಿದೆ.

Join Whatsapp