Home ಟಾಪ್ ಸುದ್ದಿಗಳು ಅಕ್ರಮ ಅಕ್ಕಿ ಸಾಗಾಟ ಪ್ರಕರಣ: ಬಿಜೆಪಿ ಮುಖಂಡ ಗಡಿಪಾರು

ಅಕ್ರಮ ಅಕ್ಕಿ ಸಾಗಾಟ ಪ್ರಕರಣ: ಬಿಜೆಪಿ ಮುಖಂಡ ಗಡಿಪಾರು

ಕಲ್ಬುರ್ಗಿ: ಅಕ್ರಮ ಅಕ್ಕಿ ಸಾಗಾಟ, ಅಪರಾಧ ಚಟುವಟಿಕೆ ಸೇರಿದಂತೆ ಸುಮಾರು 30ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ, ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಎಂಬಾತನನ್ನು ಕಲ್ಬುರ್ಗಿ ಪೊಲೀಸರು ಒಂದು ವರ್ಷ ಕಾಲ ಶಿವಮೊಗ್ಗಕ್ಕೆ ಗಡಿಪಾರು ಮಾಡಿ ಆದೇಶ ನೀಡಿದ್ದಾರೆ.

ಬಿಜೆಪಿ ಮಣಿಕಂಠ ರಾಥೋಡ್ ಎಂಬಾತನ ಮೇಲೆ ನಿರಂತರ ಪ್ರಕರಣ ದಾಖಲಾಗುತ್ತಿದ್ದು, ಜಾಮೀನು ಪಡೆದ ತಕ್ಷಣ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಒಂದು ವರ್ಷ ಶಿವಮೊಗ್ಗದ ಗ್ರಾಮಾಂತರ ಠಾಣೆಗೆ ಹೋಗಿ ಪ್ರತಿದಿನ ಸಹಿ ಮಾಡುವಂತೆ ತಮ್ಮ ಆದೇಶದಲ್ಲಿ ಕಲ್ಬುರ್ಗಿ ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version