Home ಟಾಪ್ ಸುದ್ದಿಗಳು ರಮೇಶ್ ಜಾರಕಿಹೊಳಿಗೆ ತಾಕತ್ತಿದ್ದರೆ ಸರಕಾರ ಬೀಳಿಸಲಿ: ಸಚಿವ ಲಾಡ್ ಸವಾಲು

ರಮೇಶ್ ಜಾರಕಿಹೊಳಿಗೆ ತಾಕತ್ತಿದ್ದರೆ ಸರಕಾರ ಬೀಳಿಸಲಿ: ಸಚಿವ ಲಾಡ್ ಸವಾಲು

ಧಾರವಾಡ : ರಾಜ್ಯ ಸರಕಾರವನ್ನು ಬೀಳಿಸುವ ಬಗ್ಗೆ ಪದೇ ಪದೇ ರಮೇಶ್ ಜಾರಕಿಹೊಳಿ ಮಾತನಾಡುತ್ತಿದ್ದಾರೆ, ಆ ಮಾದರಿ, ಈ ಮಾದರಿ ಎಂದೆಲ್ಲ ಹೇಳುತ್ತಿದ್ದಾರೆ. ಹೀಗೆಲ್ಲ ಮಾತಾಡೊ ಬದಲು ತಾಕತ್ತಿದ್ದರೆ ಸರಕಾರ ಬೀಳಿಸಲಿ. ಒಮ್ಮೆ ಸರಕಾರ ಕೆಡವಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸವಾಲ್ ಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೇನು ಚೌಕಬಾರಾ ಆಟವಾ? ಪ್ರತಿಯೊಬ್ಬರು ಸರ್ಕಾರ ಕೆಡುವುತ್ತೇವೆ ಅಂತಾರೆ. ಮಹಾರಾಷ್ಟ್ರ ಮಾದರಿ, ಆ ಮಾದರಿ ಈ ಮಾದರಿ ಅಂತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಅಧಿಕಾರದಲ್ಲಿ ಮಾತ್ರ ಬಿಜೆಪಿಗೆ ಆಸಕ್ತಿ. ಹೀಗಾಗಿ ಕಾಂಗ್ರೆಸ್ ಸರಕಾರ ಬಂದು ನೂರು ದಿನ ಆಯ್ತು. ಈಗಲೂ ಅಭಿವೃದ್ಧಿ ಆಗಿಲ್ಲ ಎಂಬುದನ್ನೇ ಹೇಳುತ್ತಾ ಕೂತಿದ್ದಾರೆ ಎಂದರು‌.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಸಚಿವರ ಬದಲಾವಣೆ ಕೂಗು ಇರುವುದು ಸಹಜ. ಆದರೆ ಇದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

Join Whatsapp
Exit mobile version