Home ಟಾಪ್ ಸುದ್ದಿಗಳು ಮೊಮ್ಮಗನ ಪೆನ್‌ಡ್ರೈವ್‌ ಪ್ರಕರಣದಿಂದ ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು

ಮೊಮ್ಮಗನ ಪೆನ್‌ಡ್ರೈವ್‌ ಪ್ರಕರಣದಿಂದ ದೇವೇಗೌಡರಿಗೆ ನೋವಾಗಿದ್ದರೆ ಏನೂ ಮಾಡಲಾಗದು

ಶಿವಮೊಗ್ಗ: ದೇವೇಗೌಡರು ಸುದೀರ್ಘ‌ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರ ಹಿರಿತನಕ್ಕೆ ಗೌರವವೂ ಇದೆ. ದೇವೇಗೌಡರು ನಮಗೂ ನಾಯಕರು. ಅವರ ಮೊಮ್ಮಗನ ಪೆನ್‌ಡ್ರೈವ್‌ ಪ್ರಕರಣದಿಂದ ಅವರಿಗೆ ನೋವು, ಆತಂಕವಾಗಿದ್ದರೆ ಏನೂ ಮಾಡಲು ಆಗದು. ಇದು ಯಾರೂ ಖುಷಿಪಡುವ ವಿಚಾರವಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಪೆನ್‌ಡ್ರೈವ್‌ ತನಿಖೆ ವಿಚಾರದಲ್ಲಿ ಸರಕಾರ ಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದ ಸಚಿವರು, ಇದರಲ್ಲಿ ರಾಜಕೀಯ ಪ್ರಶ್ನೆಯೇ ಇಲ್ಲ. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದರು.

ಡಿ.ಕೆ.ಶಿವಕುಮಾರ್‌ ಕೂಡ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದೂ ತಿಳಿಸಿದರು. ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾಗಿದೆ. ಹಾಗಾಗಿ ಮಾಜಿ ಸಚಿವ ರೇವಣ್ಣ ಬಂಧನವಾಗಿದೆ. ಇಂಥ ಘಟನೆ ಬೇರೆ ಪಕ್ಷದಲ್ಲಿ ನಡೆದಿದ್ದರೆ ಅಮಿತ್‌ ಶಾ, ಬಿಜೆಪಿ ನಾಯಕರು ಎಷ್ಟು ಮಾತನಾಡುತ್ತಿದ್ದರು ಎಂದು ಪ್ರಶ್ನಿಸಿದರು.

Join Whatsapp
Exit mobile version