Home ಟಾಪ್ ಸುದ್ದಿಗಳು ಸಿಬಿಐ ವರದಿಯನ್ನು ಧಿಕ್ಕರಿಸುತ್ತೇನೆ, ಕೇಂದ್ರ ಸರ್ಕಾರ ಮೇಸ್ತ ಕೇಸನ್ನು ರೀ ಓಪನ್ ಮಾಡಬೇಕು: ಮುತಾಲಿಕ್

ಸಿಬಿಐ ವರದಿಯನ್ನು ಧಿಕ್ಕರಿಸುತ್ತೇನೆ, ಕೇಂದ್ರ ಸರ್ಕಾರ ಮೇಸ್ತ ಕೇಸನ್ನು ರೀ ಓಪನ್ ಮಾಡಬೇಕು: ಮುತಾಲಿಕ್

ಉಡುಪಿ: ಪರೇಶ್ ಮೇಸ್ತ ನನ್ನು ನೂರಕ್ಕೆ ನೂರು ಕೊಲೆ ಮಾಡಲಾಗಿದೆ. ಕೇಂದ್ರ ಸರ್ಕಾರ ಈ ಕೇಸನ್ನು ರೀ ಓಪನ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಎಲ್ಲಾ ಸಾಕ್ಷಗಳನ್ನು ನಾಶ ಮಾಡಿದೆ. ಕೇಂದ್ರ ಸರ್ಕಾರ ಕೇಸ್ ಅನ್ನು ರೀ ಓಪನ್ ಮಾಡಬೇಕು. ಸಹಜ ಸಾವು ಅನ್ನೋದು ತಪ್ಪು. ಈ ಪ್ರಕ್ರಿಯೆಯಲ್ಲಿ ಅನ್ಯಾಯವಾಗಿದೆ. ನಾನು ಇದನ್ನು ಧಿಕ್ಕರಿಸುತ್ತೇನೆ, ವಿರೋಧಿಸುತ್ತೇನೆ. ಇದು ಅತ್ಯಂತ ಮೋಸ ಮಾಡಿದ ವರದಿಯಾಗಿದೆ ಎಂದು ಹೇಳಿದ್ದಾರೆ.


ಈ ವರದಿಯಿಂದ ಹಿಂದೂ ಸಮಾಜಕ್ಕೆ, ಆತನ ಕುಟುಂಬಕ್ಕೆ ತೀರಾ ಅನ್ಯಾಯವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Join Whatsapp
Exit mobile version