‘ಬಿಜೆಪಿಗೆ ಬರುವ ಮುನ್ನ ನನಗೆ ಹಣದ ಆಫರ್ ನೀಡಿದ್ದರು’: ಸಚಿವ ಸ್ಥಾನ ಕಳೆದುಕೊಂಡ ಶ್ರೀಮಂತ ಪಾಟೀಲ್ ಹೇಳಿಕೆ

Prasthutha|

ಬೆಳಗಾವಿ: ಬಿಜೆಪಿಗೆ ಬರುವ ಮುನ್ನ ನನಗೆ ಹಣದ ಆಫರ್ ನೀಡಲಾಗಿದ್ದು, ನಿಮಗೆ ಎಷ್ಟು ಹಣ ಬೇಕು ಎಂದು ಕೇಳಿದ್ದರು ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ್ ಬಿಜೆಪಿ ವಿರುದ್ದ ಆರೋಪ ಮಾಡಿದ್ದಾರೆ.

- Advertisement -

 ಕಾಗೆವಾಡದಲ್ಲಿ ಈ ಬಗ್ಗೆ ಇಂದು ಮಾತನಾಡಿದ ಅವರು “ಆಪರೇಷನ್ ಕಮಲದ ವೇಳೆ ಬಿಜೆಪಿ ನಾಯಕರು ಹಣದ ಆಮಿಷ ನೀಡಿದ್ದರು. ಆದರೆ ನಾನು ಹಣ ಬೇಡ, ಸರ್ಕಾರ ರಚನೆಯಾದ ಬಳಿಕ ಸೂಕ್ತ ಸ್ಥಾನಮಾನ ನೀಡಿ  ಎಂದು ಕೇಳಿದ್ದೆ. ಹೀಗಾಗಿ ನಾನು ಹಣ ಪಡೆಯದೇ ಬಿಜೆಪಿಗೆ ಬಂದಿದ್ದೇನೆ” ಎಂದು ಸಚಿವ ಸ್ಥಾನ ಕಳೆದುಕೊಂಡ ಬಳಿಕ ಶ್ರೀಮಂತ ಪಾಟೀಲ್ ಹೇಳಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದ್ದ  ಶ್ರೀಮಂತ ಪಾಟೀಲ್ ಸಮ್ಮಿಶ್ರ ಸರ್ಕಾರದ ಪತನದ ವೇಳೆ ಬಿಜೆಪಿ ಸೇರಿ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಪಡೆದಿದ್ದರು. ನಂತರ ಬೊಮ್ಮಾಯಿ ಸರ್ಕಾರದಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಿದ್ದರು.

Join Whatsapp