ನನಗೂ ‘ಬ್ಯಾರಿ’ ಸಮುದಾಯದ ಜೊತೆಗೆ ವ್ಯವಹಾರಿಕವಾಗಿ ಸಂಬಂಧ ಇದೆ: ಡಿಕೆ ಶಿವಕುಮಾರ್

Prasthutha|

ಬೆಂಗಳೂರು: ನನಗೂ ‘ಬ್ಯಾರಿ’ ಸಮುದಾಯದ ಜೊತೆಗೆ ರಾಜಕೀಯ, ವ್ಯವಹಾರಿಕವಾಗಿ ಸಂಬಂಧ ಇದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಬ್ಯಾರಿ ಸಮುದಾಯ ಭವನ ಉದ್ಘಾಟನೆಯಲ್ಲಿ ಡಿಕೆಶಿ ಮಾತನಾಡಿದ್ದಾರೆ.


ಮಂಗಳೂರು ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು. ಯುಟಿ ಖಾದರ್ ಅವರೆ ಮಂತ್ರಿ ಸ್ಥಾನ ಸಿಕ್ಲಿಲ್ಲ ಅಂತಾ ಚಿಂತೆ ಮಾಡೋದು ಬೇಡ. ಅದಕ್ಕಿಂತಲೂ ಹೆಚ್ಚಿನ ಸ್ಥಾನ ಸಿಕ್ಕಿದೆ. ಎಸ್.ಎಂ ಕೃಷ್ಣ, ಕೂಡ ಸ್ಪೀಕರ್ ಆಗಿದ್ದವರೆ. ಮುಂದೆ ನಿಮ್ಮ ಸ್ಥಾನ ಇನ್ನೂ ಎಲ್ಲಿಗೆ ಹೋಗುತ್ತೋ. ನನ್ನ ಕೈಯಲ್ಲಿ ಆದಷ್ಟು ನೆರವು ನೀಡ್ತಿನಿ. ಇನ್ನೂ ನಾಲ್ಕು ಕಟ್ಟಡ ಬೆಂಗಳೂರಲ್ಲೂ ಕಟ್ಟಿ ಮಂಗಳೂರಲ್ಲೂ ಕಟ್ಟಿ, ಅದಕ್ಕೆ ನನ್ನ ಸಹಕಾರ ಇದೆ ಎಂದರು.



Join Whatsapp
Exit mobile version