Home ಟಾಪ್ ಸುದ್ದಿಗಳು ನಾನು ಇಂಡಿಯಾ ಮೈತ್ರಿಕೂಟದ ಭಾಗ, ಬಿಜೆಪಿ ಬೆನ್ನೆಲುಬು ನಾವು ಮುರಿದಿದ್ದೇವೆ: ಮಮತಾ ಬ್ಯಾನರ್ಜಿ

ನಾನು ಇಂಡಿಯಾ ಮೈತ್ರಿಕೂಟದ ಭಾಗ, ಬಿಜೆಪಿ ಬೆನ್ನೆಲುಬು ನಾವು ಮುರಿದಿದ್ದೇವೆ: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ನಾನು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದೇನೆ. ಬಿಜೆಪಿ ಬೆನ್ನೆಲುಬನ್ನು ನಾವು ಮುರಿದಿದ್ದೇವೆ ಎಂದು ಚುನಾವಣಾ ಫಲಿತಾಂಶದ ಬಗ್ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಹಿನ್ನೆಲೆ ಮೋದಿ ರಾಜೀನಾಮೆ ನೀಡಬೇಕು. ವಿಶ್ವಾಸ ಕಳೆದುಕೊಂಡ ಮೋದಿ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ನಾಳೆಯ ‘ಇಂಡಿಯಾ’ ಸಭೆಯಲ್ಲಿ ಭಾಗವಹಿಸುತ್ತೇನೆ.ಶರತ್ ಪವಾರ್, ಉದ್ದವ್ ಠಾಕ್ರೆ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ.

ನರೇಂದ್ರ ಮೋದಿ ಆಡಳಿತದ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿತ್ತು.ಇನ್ನು ಮುಂದೆ ತನಿಖಾ ಸಂಸ್ಥೆಗಳ ದುರ್ಬಳಕೆ ಆಗದಂತೆ ತಡೆಯಬೇಕು ಎಂದು ಹೇಳಿದ್ದಾರೆ.

ಸಂದೇಶ್ ಖಾಲಿ ಬಗ್ಗೆ ಸುಳ್ಳು ಹಬ್ಬಿಸಿದರು. ಬಿಜೆಪಿಯವರು ಟಿಡಿಪಿ, ಜೆಡಿಯು ಆಸರೆಯ ಮೇಲೆ ನಿಂತಿದ್ದಾರೆ. ಶ್ರೀರಾಮ ಮಂದಿರವನ್ನು ಚುನಾವಣೆ ವಿಷಯ ಮಾಡಿದರು. ಆದರೆ ಅಯೋಧ್ಯೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಮೂರನೇ ಎರಡರಷ್ಟು ಸೀಟು ಬಿಜೆಪಿಗೆ ಸಿಕ್ಕಿಲ್ಲ. ನರೇಂದ್ರ ಮೋದಿ ಸಂವಿಧಾನ ಬದಲಿಸಲು ಆಗುವುದಿಲ್ಲ ಎಂದು ಟಿಎಂಸಿ ನಾಯಕಿ ಹೇಳಿದ್ದಾರೆ.

Join Whatsapp
Exit mobile version